More

    ಬಂಡಿ ಎಳೆಯುವ ಸ್ಪರ್ಧೆ ಕೊಲ್ಮಿ ಮಹಾದೇವ ಪ್ರಥಮ

    ಮಾನ್ವಿ: ತಾಲೂಕಿನ ಉಮಳಿಹೊಸೂರು ಗ್ರಾಮದ ಜಗದ್ಗುರು ಮೌನೇಶ್ವರ ಜಾತ್ರೆ ಮಹೋತ್ಸವದ ಅಂಗವಾಗಿ ಮಂಗಳವಾರ ಎತ್ತುಗಳ ಬಂಡಿ ಎಳೆಯುವ ಸ್ಪರ್ಧೆ ಮನಮೋಹಕವಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಕೊಲ್ಮಿ ಮಹಾದೇವ ಅವರು 11 ತೊಲೆ ಬೆಳ್ಳಿ ಕಡಗ ಬಹುಮಾನ ಪಡೆದುಕೊಂಡರು. ದ್ವಿತೀಯ ಬಹುಮಾನ ಪರಸಯ್ಯನಾಯಕ ಕೊಲ್ಮಿ 7 ತೊಲೆ ಬೆಳ್ಳಿ ಕಡಗ ಮತ್ತು ತೃತೀಯ ಬಹುಮಾನ ಆಂಜನೇಯ ಗೊಬ್ಬರಕಲ್ 5 ತೊಲೆ ಬೆಳ್ಳಿ ಕಡಗ ಗಳಿಸಿದರು.

    ಇದನ್ನೂ ಓದಿ: ಇಲ್ಲಿಯವರೆಗೂ ಯಾರಿಗೂ ತಿಳಿಯದ ಸೀಕ್ರೆಟ್ ಹಂಚಿಕೊಂಡ ನಟಿ ಸಮಂತಾ

    ಪ್ರಥಮ ಬಹುಮಾನ ಹಳ್ಳಿಹೊಸೂರು ಬಂಧುಗಳು, ದ್ವಿತೀಯ ಬಹುಮಾನ ರಾಮಣ್ಣನಾಯಕ ಹಾಗೂ ತೃತೀಯ ಬಹುಮಾನ ರಂಗಪ್ಪನಾಯಕ ವಿಜೇತರಿಗೆ ಬಹುಮಾನ ನೀಡಿದರು. ಉಮಳಿಪನ್ನೂರು ಗ್ರಾಮ ಸೇರಿ ಸುತ್ತಲಿನ ಗ್ರಾಮದ ಒಟ್ಟು 9 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಕಾತರಕಿ ಅಯ್ಯಪ್ಪ ತಾತ, ರೈತರಾದ ರಾಮಣ್ಣ ನಾಯಕ, ರಂಗಪ್ಪ ನಾಯಕ, ಕೊಲ್ಮಿ ಮಹಾದೇವ, ಪರಸಯ್ಯ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts