ಮಾನ್ವಿ: ಪಟ್ಟಣದ ನಂಜನಗೂಡು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಜಗನ್ನಾಥದಾಸರ ಸನ್ನಿಧಾನದಲ್ಲಿ ಸೋಮವಾರ ಉತ್ತರಾಧನೆ ಅಂಗವಾಗಿ ಮಹಾರಥೋತ್ಸವ ಜರುಗಿತು. ಜಗನ್ನಾಥದಾಸರ ಸ್ತಂಭ ಕಂಬಕ್ಕೆ ಬೆಳಗ್ಗೆ ಫಲ ಪಂಚಾಮೃತ ಅಭಿಷೇಕ ಹಾಗೂ ವಿವಿಧ ಹೂಗಳಿಂದ ವಿಶೇಷವಾದ ಅಲಂಕಾರ ಮಾಡಲಾಯಿತು. ಸ್ವಸ್ತಿವಾಚನ ಹರಿಕಾಥಮೃತಸಾರ ವಾಚನ, ವಿದ್ವಾಂಸರಿಂದ ಪ್ರವಚನ ಹಾಗೂ ಕಲಾವಿದರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.