ನವದೆಹಲಿ: ಕರೊನಾ ಸೋಂಕಿನಿಂದ ಜನರ ರಕ್ಷಣೆ ಮಾಡಲು ಇದ್ದ ಏಕೈಕ ಮಾರ್ಗ ಲಾಕ್ಡಾನ್. ಹೀಗಾಗಿ ಇದನ್ನು ಜಾರಿಗೊಳಿಸಬೇಕಾಯಿತು. ಲಾಕ್ಡೌನ್ ಜಾರಿ ಮಾಡಿದ್ದರಿಂದ ಹಲವು ಮಂದಿ ನನ್ನ ಮೇಲೆ ಕೋಪಗೊಂಡಿದ್ದಾರೆ. ನೀವು ಹಾಗೂ ನಿಮ್ಮ ಕುಟುಂಬದ ರಕ್ಷಣೆಗಾಗಿ ನಾನು ಈ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಡೀ ವಿಶ್ವಕ್ಕೆ ಕರೊನಾ ಸೋಂಕು ಹರಡಿದೆ. ಇದರ ವಿರುದ್ಧ ವಿಶ್ವವೇ ಹೋರಾಡುತ್ತಿದೆ. ನಾವು ಕೂಡ ಹೋರಾಟ ಮಾಡಬೇಕಾಗಿದೆ. ಲಾಕ್ಡೌನ್ ಕರೊನಾ ವಿರುದ್ಧದ ಹೋರಾಟ. ಈ ನಿರ್ಧಾರ ಕೈಗೊಂಡಿದ್ದಕ್ಕೆ ನಾನು ನಿಮ್ಮಲಿ ಕ್ಷಮೆ ಯಾಚಿಸುತ್ತೇನೆ ಎಂದು ಅವರು ಹೇಳಿದರು.
ಲಾಕ್ಡೌನ್ ಲಕ್ಷ್ಮಣ ರೇಖೆಯನ್ನು ಯಾರು ದಾಟಬಾರದು. ಕರೊನಾ ವಿರುದ್ಧದ ಹೋರಾಟಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕಿದೆ ಎಂದು ಅವರು ಹೇಳಿದರು.
ಆರೋಗ್ಯವೇ ಭಾಗ್ಯ: ದೇಶದ ಜನರ ಆರೋಗ್ಯವೇ ಭಾಗ್ಯ. ಲಾಕ್ಡೌನ್ ನಿಯಮ ಉಲ್ಲಂಘಿಸಿದರೆ ಸೋಂಕಿನಿಂದ ರಕ್ಷಣೆ ಸಾಧ್ಯ ಇಲ್ಲ. ಕೆಲವರು ಲಾಕ್ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇನ್ನಾದರೂ ಮನೆಯಲ್ಲಿದ್ದು ವೈರಸ್ ಸೋಂಕಿನಿಂದ ರಕ್ಷಣೆ ಪಡೆಯಿರಿ. ಇದು ಒಂದೆರೆಡು ದಿನ ಕಠಿಣ ಅನಿಸಬಹುದು. ಆದರೂ ಸೋಂಕಿನಿಂದ ನಮಗೆ ರಕ್ಷಣೆ ನೀಡುತ್ತದೆ.
ಮೊದಲು ಕರೊನಾ ವೈರಸ್ ಪತ್ತೆಯಾದ ಹುಬೈ ಪ್ರಾಂತ್ಯ ಬಿಟ್ಟು ಗುಳೆ ಹೋಗುತ್ತಿರುವ ನಾಗರಿಕರು: ತಡೆದ ಪೊಲೀಸರ ಮೇಲೆ ಹಲ್ಲೆ