More

    ಆ.14ರಂದು ಧರ್ಮಸ್ಥಳದಲ್ಲಿ ಮಂಜುನಾದ-1 ಲೋಕಾರ್ಪಣೆ

    ಬೆಳ್ತಂಗಡಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ, ಮಣಿಕೃಷ್ಣಸ್ವಾಮಿ ಅಕಾಡೆಮಿ ಸಹಯೋಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ರಚಿತವಾದ ಮಂಜುನಾದ -1 ಕೃತಿ ಲೋಕಾರ್ಪಣೆ ಆ.14ರಂದು ಧರ್ಮಸ್ಥಳದಲ್ಲಿ ನಡೆಯಲಿದೆ.

    ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಡಾ.ಹೇಮಾವತಿ ವೀ.ಹೆಗ್ಗಡೆ ಕೃತಿಗಳ ಲೋಕಾರ್ಪಣೆ ಮಾಡಲಿದ್ದು ಮಂಗಳೂರು ವಿವಿ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸುವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಹಿರಿಯ ಸಂಗೀತ ತಜ್ಞ ಡಾ.ರಾಜ್‌ಕುಮಾರ್ ಭಾರತಿ, ಶಾಸಕ ಹರೀಶ್ ಪೂಂಜ, ಮಣಿಕೃಷ್ಣಸ್ವಾಮಿ ಅಕಾಡೆಮಿ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಅಧ್ಯಕ್ಷ ಕ್ಯಾ.ಗಣೇಶ್ ಕಾರ್ಣಿಕ್ ಮೊದಲಾದವರು ಭಾಗವಹಿಸುವರು.

    ಬೆಳಗ್ಗೆ 10ರಿಂದ ಸಂಗೀತ ಕಛೇರಿ ನಡೆಯಲಿದ್ದು, ಹಾಡುಗಾರಿಕೆಯಲ್ಲಿ ಆತ್ರೇಯಿ ಕೃಷ್ಣ ಕಾರ್ಕಳ, ಕೆ.ಅಶ್ವಿಜಾ ಉಡುಪ, ಕಿನ್ನಿಗೋಳಿ, ಮೇಧಾ ಉಡುಪ ಮಂಗಳೂರು, ಶರಣ್ಯ ಕೆ.ಎನ್.ಸುರತ್ಕಲ್, ಶ್ರದ್ಧಾ ಕೋಟೆ ಉಜಿರೆ, ಶ್ರುತಿ ಎಸ್.ಭಟ್ ಚೆನ್ನೈ, ಉಷಾ ಎಚ್.ಮಣಿಪಾಲ, ಅದಿತಿ ಜಿ.ಪ್ರಹ್ಲಾದ್ ಬೆಂಗಳೂರು, ದಿವ್ಯಶ್ರೀ ಮಣಿಪಾಲ, ನಮ್ರತಾ ಎಸ್.ಚೆನ್ನೈ, ಶೋಭಿತಾ ಭಟ್ ಕಿನ್ನಿಗೋಳಿ, ಶ್ರೇಯಾ ಕೊಳತ್ತಾಯ ಸುರತ್ಕಲ್, ಸುಮೇಧ ಕೆ.ಎನ್ ಸುರತ್ಕಲ್ ಭಾಗವಹಿಸುವರು. ವಯಲಿನ್ ಲಕ್ಷ್ಮೀ ಎಸ್.ಭಟ್ ಚೆನ್ನೈ, ಮೃದಂಗ ನಿಕ್ಷಿತ್ ಟಿ.ಪುತ್ತೂರು, ಮೋರ್ಸಿಂಗ್ ಬಾಲಕೃಷ್ಣ ಹೊಸಮನೆ ಪುತ್ತೂರು, ಖಂಜಿರ ಸುಮುಖ ಕಾರಂತ್ ಸುರತ್ಕಲ್, ಆರ್.ಸಾಯಿಭರತ್ ಸಹಕರಿಸುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts