ನವದೆಹಲಿ: ಕಾಳಿ ಮಾತೆಯ ವಿವಾದ ಸೃಷ್ಟಿಸಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈಗೆ ದೆಹಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಸಾಕ್ಷ್ಯಾಚಿತ್ರವೊಂದು ನಿರ್ದೇಶಿಸುತ್ತಿರುವ ಲೀನಾ ಕಾಳಿ ಮಾತೆ ಕೈಯಲ್ಲಿ ಸಿಗರೇಟು ನೀಡಿದ ಪೋಸ್ಟರ್ ಬಿಡುಗಡೆ ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು.
ದೇಶದ ಹಲವು ಕಡೆ ಲೀನಾ ವಿರುದ್ಧ ದೂರುಗಳು ದಾಖಲಾಗಿದ್ದು, ಸದ್ಯ ದೆಹಲಿ ಕೋರ್ಟ್ ಸಮನ್ಸ್ ಕೂಡ ಜಾರಿ ಮಾಡಿದ್ದು, ಆಗಸ್ಟ್ 6 ರಂದು ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ.ಚಿತ್ರದ ಪೋಸ್ಟರ್ನಲ್ಲಿ ಹಿಂದೂ ದೇವತೆ ಕಾಳಿ ಮಾತೆಗೆ ಸಿಗರೇಟ್ ನೀಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಲ್ಲದೇ, ಸಭ್ಯತೆಯ ಮೂಲಭೂತ ಅಂಶಗಳಿಗೆ ವಿರುದ್ಧವಾಗಿದೆ ಎಂದು ಕೋರ್ಟ್ನಲ್ಲಿ ಈ ಪೋಸ್ಟರ್ ವಿರುದ್ಧ ವಾದ ಮಂಡಿಸಲಾಗಿದೆ.
ಏನಿದು ವಿವಾದ?
ಮಧುರೈನಲ್ಲಿ ಜನಿಸಿ ಟೊರೊಂಟೊದಲ್ಲಿ ನೆಲೆಸಿರುವ ನಿರ್ದೇಶಕಿ ಲೀನಾ ಮಣಿಮೇಕಲೈ ಇತ್ತೀಚೆಗೆ ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕಾಳಿ ಮಾತೆಯಂತೆ ವೇಷಭೂಷಣ ಧರಿಸಿರುವ ಮಹಿಳೆಯು ಧೂಮಪಾನ ಮಾಡುತ್ತಿರುವ ಪೋಸ್ಟರ್ ಬಿಡುಗಡೆ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಟ್ವಿಟ್ಟರ್ ಸಂಸ್ಥೆಯಿಂದಲೇ ಈ ಟ್ವೀಟ್ ಡಿಲೀಟ್!
ಯಾವಾಗ ಈ ಟ್ವೀಟ್ ಸಾಕಷ್ಟು ವಿವಾದಕ್ಕೆ ಕಾರಣವಾಯಿತೋ, ಎಚ್ಚೆತ್ತುಕೊಂಡ ಟ್ವಿಟರ್ ಸಂಸ್ಥೆಯು ಈ ಟ್ವೀಟ್ ಅನ್ನು ಡಿಲೀಟ್ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಲೀನಾ ಮಣಿಮೇಕಲೈ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಲೀನಾ ಮಣಿಮೇಕಲೈ ಅವರನ್ನು ಕೂಡಲೇ ಬಂಧಿಸಿ ಎಂಬ ಆಗ್ರಹವೂ ಕೇಳಿಬರುತ್ತಿದೆ. (ಏಜೆನ್ಸೀಸ್)
ವಿರಾಟ್ ಕೊಹ್ಲಿಯನ್ನು ಕೈ ಬಿಡಬೇಕೆಂದ ಕಪಿಲ್ದೇವ್ ಹೇಳಿಕೆಗೆ ನಾಯಕ ರೋಹಿತ್ ಶರ್ಮಾ ತಿರುಗೇಟು
ಮಧ್ಯರಾತ್ರಿಯಲ್ಲಿ ಕೇರಳದ ಲೂ ಲೂ ಮಾಲ್ನಲ್ಲಿ ಜನವೋ ಜನ, ಸಿಬ್ಬಂದಿಯೇ ಶಾಕ್! ಕಾರಣ ಇಲ್ಲಿದೆ