ಚಿಕ್ಕಬಳ್ಳಾಪುರ: ಮಂಗಳೂರು ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟು ಸದ್ಯ ಪೊಲೀಸರಿಂದ ಬಂಧಿತನಾಗಿರುವ ಆರೋಪಿ ಆದಿತ್ಯರಾವ್ ಈ ಹಿಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ಬಾಂಬ್ ಇಡುವುದಾಗಿ ಬೆದರಿಸಿದ್ದ ಎನ್ನಲಾಗಿದೆ.
ಬೆದರಿಕೆ ಕರೆ ಮಾಡಿದ್ದ ಆದಿತ್ಯರಾವ್ನನ್ನು ಏರ್ಪೋರ್ಟ್ ಪೊಲೀಸರು ಬಂಧಿಸಿದ್ದರು. ಆತನನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದಲ್ಲಿ ಏಳು ತಿಂಗಳು ಬಂಧನದಲ್ಲಿ ಇಡಲಾಗಿತ್ತು.
ಆದರೆ ಆದಿತ್ಯ ರಾವ್ ಜೈಲಿನಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದ. ಸದಾ ಯೋಚನೆ ಮಾಡುತ್ತ ಒಬ್ಬನೇ ಕುಳಿತಿರುತ್ತಿದ್ದ. ಒಮ್ಮೊಮ್ಮೆ ಊಟಕ್ಕೂ ಬಾರದೆ ಯೋಚನೆ ಮಾಡುತ್ತಿದ್ದ. ಆತನ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾದಾಗ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಎನ್ನಲಾಗಿದೆ (ದಿಗ್ವಿಜಯ ನ್ಯೂಸ್)