More

    ಮಂಡ್ಯದಿಂದ ಎಚ್ಡಿಕೆ ಸ್ಪರ್ಧೆ ಫಿಕ್ಸ್ – ಅಧಿಕೃತ ಘೋಷಣೆ ಬಾಕಿ

    ರಾಮನಗರ: ಕುತೂಹಲ ಮೂಡಿಸಿದ್ದ ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂಬ ಕುತೂಹಲಕ್ಕೆ  ತೆರೆ ಬಿದ್ದಿದೆ, ತಾವು ಮಂಡ್ಯದಿಂದ ಸ್ಪರ್ಧೆ ಮಾಡುವುದನ್ನು ಕಾರ್ಯಕರ್ತರ ಮುಂದೆ ಮಾಜಿ ಸಿಎಂ ಖಚಿತ ಪಡಿಸಿದ್ದಾರೆ.

    ಬೆಂಗಳೂರಿನ ಜೆಪಿ ನಗರ ತಮ್ಮನಿವಾಸದಲ್ಲಿ ಸೋಮವಾರ ನಡೆದ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮಾತನಾಡಿದ ಎಚ್ ಡಿ.ಕುಮಾರಸ್ವಾಮಿ, ಮಂಡ್ಯದಿಂದ ತಮ್ಮ ಸ್ಪರ್ಧೆಯ ಅನಿವಾರ್ಯತೆಯನ್ನು ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.

    ಈ ವೇಳೆ ಬಹುತೇಕ ಎಲ್ಲಾ ಕಾರ್ಯಕರ್ತರು ಕುಮಾರಸ್ವಾಮಿ ಅವರ ಮಂಡ್ಯ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಬೇಹುಗಾರಿಕೆ ವರದಿ ತಮ್ಮ ಗೆಲುವನ್ನು ಖಾತ್ರಿಪಡಿಸಿದೆ. ಅಲ್ಲದೆ, ನಾನೇ ಸ್ಪರ್ಧೆ ಮಾಡಬೇಕು ಎನ್ನುವ ಒತ್ತಡ ಮಂಡ್ಯದಿಂದ ಕೇಳಿ ಬಂದಿದೆ. ಇಲ್ಲವಾದರೆ ಅಲ್ಲಿ ಪಕ್ಷ ಸಂಘಟನೆ ಕಷ್ಟವಾಗಲಿದೆ. ಮಂಡ್ಯದಿಂದ ತಾವು ಸ್ಪರ್ಧೆ ಮಾಡಿದರೆ, ಮಂಡ್ಯದಲ್ಲಿಯೂ ಸಹ ಪಕ್ಷ ಸಂಘಟನೆ ಮಾಡಬಹುದು. ಈ ಹಿನ್ನೆಲೆಯಲ್ಲಿ ಮಂಡ್ಯದಿಂದ ಸ್ಪರ್ಧೆ ಮಾಡಲೇಬೇಕಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

    ಆದರೆ ಕಾರ್ಯಕರ್ತರು ಇದಕ್ಕೆ ಏನೂ ಹೇಳದೆ, ಬರಿಗೈಲಿ ವಾಪಾಸಾಗಿದ್ದಾರೆ ಎಂದು ತಿಳಿದು ಬಂದಿದೆ.

    ಅಧಿಕೃತ ಘೋಷಣೆ ಬಾಕಿ 

    ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಫರ್ಧೆ ಮಾಡುವುದು ನಿಚ್ಚಳವಾಗಿದೆ. ಇದನ್ನು ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದ ಕಾರ್ಯಕರ್ತರ ಮುಂದೆ ಹೇಳಿದ್ದು, ಇದನ್ನು ಅಧಿಕೃತವಾಗಿ ಘೋಷಣೆ ಮಾಡುವುದಷ್ಟೇ ಬಾಕಿ ಉಳಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts