ನವದೆಹಲಿ: ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷೀಲಿ ಎಂಬ ಮಾತೊಂದಿದೆ. ಅಂಥದ್ದೇ ಒಂದು ಪರಿಸ್ಥಿತಿಗೆ ಇಲ್ಲೊಬ್ಬ ವ್ಯಕ್ತಿ ಗುರಿಯಾಗಿದ್ದು, ಸಾವಿನ ದವಡೆಯಿಂದ ಪಾರಾದೆ ಎಂದು ನಿಟ್ಟುಸಿರುಬಿಟ್ಟ ಬೆನ್ನಿಗೆ ಬದುಕೇ ಕೊನೆಯಾಗಿದೆ.
ಬಿಹಾರದ ಬಹದೂರ್ಗಂಜ್ ಎಂಬಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಇಲ್ಲಿನ ಎರಡು ಮಹಡಿ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಈ ಅವಘಡದಲ್ಲಿ ಮೂವರು ಸುಟ್ಟ ಗಾಯಗಳಿಗೆ ಒಳಾಗಿದ್ದರು. ಬಳಿಕ ಅವರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗಾಯಾಳುಗಳ ಪೈಕಿ ವಿನೋದ್ ಕೇಸರ್ವಾಣಿ (75) ಎಂಬವರು ಆಸ್ಪತ್ರೆಯಲ್ಲಿ ಸಾವಿಗೀಡಾದರು. ಸುಟ್ಟಗಾಯಗಳಿಗೆ ಒಳಗಾಗಿದ್ದ ಇವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಈ ವ್ಯಕ್ತಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಈ ಅವಘಡ ಸಂಭವಿಸಿದ್ದು, ಈ ಕಟ್ಟಡದ ತಳಮಹಡಿಯಲ್ಲಿ ಅಂಗಡಿ, ಮೊದಲ ಮಹಡಿಯಲ್ಲಿ ಮನೆ ಹಾಗೂ ಎರಡನೇ ಮಹಡಿಯಲ್ಲಿ ಗೋದಾಮು ಇತ್ತು. ಬೆಂಕಿಯನ್ನು ಆರಿಸಲು 10 ಅಗ್ನಿಶಾಮಕ ವಾಹನಗಳನ್ನು ತರಿಸಿಕೊಳ್ಳಬೇಕಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೀಪಾವಳಿಗೇ ರಾಜ್ಯದಲ್ಲಿ ವಿದ್ಯುತ್ ಕೊರತೆ?; ಶಾಖೋತ್ಪನ್ನ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆ ಕುಸಿತ