More

    ಪಿಎಂ ಕೇರ್ಸ್​ಗೆ ಲಕ್ಷಗಟ್ಟಲೆ ದೇಣಿಗೆ ನೀಡಿದವನ ತಾಯಿಗೇ ಸಿಗಲಿಲ್ಲ ಬೆಡ್​! ಕೊನೆಯುಸಿರೆಳೆದ ತಾಯಿಯ ಮುಂದೆ ಕಣ್ಣೀರಿಟ್ಟ ಮಗ

    ನವದೆಹಲಿ: ಕರೊನಾ ದೇಶಾದ್ಯಂತ ಹಬ್ಬುತ್ತಿದೆ. ಸೋಂಕು ನಿಯಂತ್ರಣಕ್ಕೆ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡಲು ಸಹಕಾರವಾಗಲೆಂದು ಅನೇಕರು ಪಿಎಂ ಕೇರ್ಸ್​ ನಿಧಿಗೆ ಹಣ ದೇಣಿಗೆ ನೀಡುತ್ತಿದ್ದಾರೆ. ಅದೇ ರೀತಿ ಸಮಾಜಕ್ಕಾಗಿ 2.51 ಲಕ್ಷ ರೂಪಾಯಿಯನ್ನು ಪಿಎಂ ಕೇರ್ಸ್​ಗೆ ದೇಣಿಗೆ ರೂಪದಲ್ಲಿ ನೀಡಿದ್ದ ವ್ಯಕ್ತಿಯೊಬ್ಬನ ತಾಯಿಯೂ ಕರೊನಾ ಸೋಂಕಿಗೆ ತುತ್ತಾಗಿದ್ದು, ಆಕೆಗೆ ಬೆಡ್​ ಸಿಗದೆಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಅಹಮದಾಬಾದ್​ ಮೂಲದ ವಿಜಯ್​ ಪರಿಕ್​ ಹೆಸರಿನ ವ್ಯಕ್ತಿ ಈ ಹಿಂದೆ ಕರೊನಾ ನಿಯಂತ್ರಣಕ್ಕಾಗಿ ಪಿಎಂ ಕೇರ್ಸ್​ಗೆ 2.51 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರಂತೆ. ಅದಾದ ಮೇಲೆ ಅವರ ತಾಯಿ ಸೋಂಕಿಗೆ ತುತ್ತಾಗಿದ್ದಾರೆ. ಆಕ್ಸಿಜನ್​ ಅವಶ್ಯಕತೆ ಇದ್ದ ಅವರಿಗೆ ಆಕ್ಸಿಜನ್​ ಬೆಡ್​ಗಾಗಿ ಸಾಕಷ್ಟು ಹುಡುಕಲಾಗಿದೆಯಾದರೂ ಎಲ್ಲಿಯೂ ಒಂದೇ ಒಂದು ಬೆಡ್​ ಕೂಡ ಸಿಕ್ಕಿಲ್ಲ. ಕೊನೆಗೆ ಉಸಿರಾಟ ತೊಂದರೆ ಹೆಚ್ಚಾಗಿ ತಾಯಿ ಪ್ರಾಣ ಬಿಟ್ಟಿದ್ದಾರೆ.

    ಈ ವಿಚಾರವನ್ನು ಅವರ ಮಗ ನೋವಿನಿಂದ ಟ್ವಿಟ್ಟರ್​ನಲ್ಲಿ ಹೇಳಿಕೊಂಡಿದ್ದಾರೆ. “ಪಿಎಂ ಕೇರ್ಸ್​ ನಿಧಿಗೆ ನಾನು 2.51 ಲಕ್ಷ ರೂಪಾಯಿ ದೇಣಿಗೆ ನೀಡಿದ್ದೇನೆ. ಆದರೆ ಸಾಯುತ್ತಿದ್ದ ನನ್ನ ತಾಯಿಗೆ ಆಕ್ಸಿಜನ್​ ಬೆಡ್​ ಸಿಗಲೇ ಇಲ್ಲ. ಕರೊನಾದ ಮೂರನೇ ಅಲೆಯಲ್ಲಿ ಆಕ್ಸಿಜನ್​ ಬೆಡ್​ ಕಾಯ್ದಿರಿಸಿಕೊಳ್ಳಬೇಕೆಂದರೆ ಎಷ್ಟು ದುಡ್ಡು ದೇಣಿಗೆ ನೀಡಬೇಕೆಂದು ತಿಳಿಸಿಬಿಡಿ. ನನ್ನ ಕುಟುಂಬದ ಸದಸ್ಯರನ್ನು ನಾನು ಕಳೆದುಕೊಳ್ಳಲು ಬಯಸುವುದಿಲ್ಲ.” ಎಂದು ಬರೆದುಕೊಂಡಿದ್ದಾರೆ. ತಮ್ಮ ಟ್ವೀಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್‍ನಾಥ್ ಸಿಂಗ್, ಸ್ಮೃತಿ ಇರಾನಿ, ರಾಷ್ಟ್ರಪತಿ ಭವನವನ್ನು ಟ್ಯಾಗ್​ ಮಾಡಿದ್ದಾರೆ.

    ಈ ವ್ಯಕ್ತಿಯ ನೋವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾರಂಭವಾಗಿದೆ. ಸಮಾಜಕ್ಕಾಗಿ ಚಿಂತಿಸದವನ ಕುಟುಂಬಕ್ಕೇ ಸಹಾಯ ಸಿಗದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಜನ ಮಾತನಾಡಿಕೊಳ್ಳಲಾರಂಭಿಸಿದ್ದಾರೆ. (ಏಜೆನ್ಸೀಸ್)

    ಕಂಡ ಕಂಡಲ್ಲೇ ನಿದ್ರೆ; ನಿದ್ರೆ ಎಂದರೆ ಹೆದರುವ ಏಕೈಕ ಗ್ರಾಮವಿದು…

    16 ತಾಸು ನೀರೊಳಗೇ ಇದ್ದ ಮಹಿಳೆ! ಹೊರಬಂದವಳಿಗೆ ಈಗ ಬೇಕಂತೆ ನಿಮ್ಮೆಲ್ಲರ ಸಹಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts