More

    ಜಿರಳೆಯನ್ನು ಪಶು ಆಸ್ಪತ್ರೆಗೆ ಕರೆದುತಂದ ಮಹಾನುಭಾವ!

    ಥಾಯ್ಲೆಂಡ್​ : ಭಾರತದಲ್ಲಂತೂ ಜಿರಳೆ ಕಂಡರೆ ತಕ್ಷಣ ಹೊಡೆದು ಹಾಕುವವರೇ ಹೆಚ್ಚು. ಆದರೆ ಥಾಯ್ಲೆಂಡ್​ನಲ್ಲಿ ಜಿರಳೆಯ ಬಗ್ಗೆ ಮಿಡಿಯುವ ಹೃದಯಗಳಿವೆ ಎಂಬುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಹೌದು, ಏಟುಬಿದ್ದಿದ್ದ ಜಿರಳೆ ಬಗ್ಗೆ ಅನುಕಂಪ ತೋರಿದ ಪುಣ್ಯಾತ್ಮನ ಬಗ್ಗೆ ಥಾಯಿ ಪಶುವೈದ್ಯರೊಬ್ಬರು ಫೇಸ್​ಬುಕ್​ನಲ್ಲಿ ತಿಳಿಸಿದ್ದಾರೆ.

    ರಸ್ತೆಯ ಮೇಲೆ ಏಟುತಿಂದು ಬಿದ್ದಿದ್ದ ಜಿರಳೆಯನ್ನು ವ್ಯಕ್ತಿಯೊಬ್ಬರು ಪಶುವೈದ್ಯರ ಬಳಿಗೆ ಚಿಕಿತ್ಸೆಗಾಗಿ ಕರೆದೊಯ್ದಿರುವ ಪ್ರಸಂಗ ನಡೆದಿದೆ. ಈ ಬಗ್ಗೆ ಸಮುತ್​ ಸಖೋನ್​ ಅನಿಮಲ್​ ಹಾಸ್ಪಿಟಲ್​ನ ಡಾ. ತನು ಲಂಪಾಪಟ್ಟನವನಿಚ್​ ಎಂಬ ಪಶುವೈದ್ಯ ಚಿತ್ರದ ಸಮೇತ ಪೋಸ್ಟ್​ ಮಾಡಿದ್ದಾರೆ.

    “ನಿನ್ನೆ ರಾತ್ರಿ ಯಾರೋ ರಸ್ತೆಯ ಬದಿಯಲ್ಲಿದ್ದ ಜಿರಳೆಯನ್ನು ತುಳಿದುಬಿಟ್ಟಿದ್ದರು. ಅದರ ಸ್ಥಿತಿಯನ್ನು ನೋಡಿ ಅನುಕಂಪ ಮೂಡಿದ ಸಜ್ಜನರೊಬ್ಬರು ಅದನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದರು. ಈಗ ಅದರ ಒದ್ದಾಟ ಅರ್ಧದಷ್ಟು ಕಡಿಮೆಯಾಗಿದೆ” ಎಂದು ಡಾ. ತನು ಥಾಯಿ ಭಾಷೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಜೊತೆಗೆ, “ಇದು ತಮಾಷೆಯಲ್ಲ. ಇದು ಪ್ರತಿಯೊಂದು ಜೀವಿಯ ಬಗ್ಗೆಯೂ ಅಂತಃಕರಣ ಹೊಂದಿರಬೇಕೆಂಬುದಕ್ಕೆ ಉದಾಹರಣೆ. ಇಂತಹ ಜನರು ಜಗತ್ತಿನಲ್ಲಿ ಹೆಚ್ಚಾಗಲಿ ಎಂದು ಆಶಿಸುತ್ತೇನೆ” ಎಂದು ಬರೆದಿದ್ದಾರೆ. (ಏಜೆನ್ಸೀಸ್)

    ಮಧ್ಯಪ್ರದೇಶದಲ್ಲಿ 3,000 ಕಿರಿಯ ವೈದ್ಯರ ರಾಜೀನಾಮೆ

    ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಎಲ್ಲರೂ ಪಾಸ್, ಯಾರೂ ಫೇಲ್​ ಇಲ್ಲ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts