ನವದೆಹಲಿ: ಆಫೀಸ್ ಎಂದರೆ ಕೋಪ ತಾಪ ಇರುತ್ತದೆ. ಆದರೆ ಸಣ್ಣ ವಿಚಾರಕ್ಕೆ ಕೊಲೆ ಮಾಡುವ ಹಂತಕ್ಕೆ ಹೋಗುತ್ತಾರೆಂದರೆ ನಂಬುತ್ತೀರಾ? ಕುರ್ಚಿಗಾಗಿ ತನ್ನ ಸಹೋದ್ಯೋಗಿಯನ್ನ ಗುಂಡು ಹಾರಿಸಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ಹಲ್ಲೆ ವ್ಯಕ್ತಿಯನ್ನು ವಿಶಾಲ್ (23) ಎಂದು ಗುರುತಿಸಲಾಗಿದ್ದು, ಈತ ಫಿರೋಜ್ ಗಾಂಧಿ ಕಾಲೋನಿಯ ನಿವಾಸಿಯಾಗಿದ್ದಾನೆ. ದಾಳಿಗೊಳಗಾದ ವಿಶಾಲ್ನನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದ್ದು, ದಾಳಿ ಮಾಡಿದ ವ್ಯಕ್ತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: 41ರ ವಯಸ್ಸಿನಲ್ಲಿ 550 ಮಕ್ಕಳಿಗೆ ‘ತಂದೆ’ಯಾದ ವ್ಯಕ್ತಿ!
ವಿಶಾಲ್ ತನ್ನ ಸಹೋದ್ಯೋಗಿ ಅಮನ್ ಜೊತೆ ಕುರ್ಚಿಯ ವಿಷಯವಾಗಿ, ಜಗಳವಾಡಿದ್ದ. ಮರುದಿನವೂ ಜಗಳ ಮುಂದುವರಿದಿದೆ. ಈ ವೇಳೆ ಜಗಳವಾಡಿದ ವಿಶಾಲ್ ಆಫೀಸಿನಿಂದ ಹೊರ ನಡೆದಿದ್ದಾರೆ. ವಿಶಾಲ್ ಹೇಳುವ ಪ್ರಕಾರ, ತಾನು ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಅಮನ್ ಹಿಂದಿನಿಂದ ಬಂದು ಗುಂಡು ಹಾರಿಸಿದ್ದಾನೆ ಎಂದು ಹೇಳಿದ್ದಾನೆ.
ಗುರುಗ್ರಾಮದ ಕಚೇರಿಯೊಂದರಲ್ಲಿ ಕುರ್ಚಿಯ ವಿಷಯಕ್ಕೆ ಇಬ್ಬರು ಜಗಳ ಮಾಡಿಕೊಂಡಿದ್ದು, ಈ ಜಗಳ ವಿಕೋಪಕ್ಕೇರಿ, ಓರ್ವ ವ್ಯಕ್ತಿ ಇನ್ನೋರ್ವ ವ್ಯಕ್ತಿಗೆ ಗುಂಡಿಕ್ಕಿದ್ದಾನೆಂದು ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಪತಿ ವೃತ್ತಿನಿರತ ಭಿಕ್ಷುಕನಾಗಿದ್ದರೂ ಪತ್ನಿಗೆ ಜೀವನಾಂಶ ನೀಡಬೇಕಾಗುತ್ತದೆ!;