ಥಾಣೆ: ಕೌಟುಂಬಿಕ ಕಲಹದಿಂದ ಬೇಸತ್ತು ಸ್ನೇಹಿತನ ಸಹಾಯದಿಂದ ಪತ್ನಿಯ ಕೊಂದು, ಮೂಟೆ ಕಟ್ಟಿ ಕಾಡಿನ ಪೊದೆಗಳಲ್ಲಿ ಬಿಸಾಡಿ ಬಂದಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಸಹಕರಿಸಿದ್ದಕ್ಕಾಗಿ ಸ್ನೇಹಿತನೂ ಕೋಳ ತೊಡಿಸಿಕೊಂಡಿದ್ದಾನೆ.
ಅಂಬುಜ್ ತಿವಾರಿ (28) ಮತ್ತು ಶ್ರೀಕಾಂತ್ ಚೌಬೆ ಬಂಧಿತರು. ನೀಲಂ ಹತ್ಯೆಯಾದವಳು. ನೀಲಂ ಮತ್ತು ಅಂಬುಜ್ ತಿವಾರಿ ವಿವಾಹವಾಗಿ ನವಿ ಮುಂಬೈನಲ್ಲಿ ಸಂಸಾರ ಹೂಡಿದ್ದರು. ಕೆಲದಿನಗಳ ಹಿಂದೆ ದಂಪತಿಯ ನಡುವೆ ಕಲಹ ಉಂಟಾಗಿತ್ತು. ಇದು ವಿಪರೀತಕ್ಕೆ ಹೋಗಿದ್ದರಿಂದ ನೀಲಂಳನ್ನು ಕೊಲ್ಲಲು ಅಂಬುಜ್ ನಿರ್ಧರಿಸಿದ್ದ.
ಅದೊಂದು ದಿನ ತನ್ನ ಸ್ನೇಹಿತ ಶ್ರೀಕಾಂತ್ ಚೌಬೆಯನ್ನು ತನ್ನ ಮನೆಗೆ ಕರೆಯಿಸಿಕೊಂಡ ಅಂಬುಜ್, ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದಿದ್ದ. ಬಳಿಕ ಆಕೆಯ ಶವವನ್ನು ಪ್ಲಾಸ್ಟಿಕ್ ಡ್ರಂನೊಳಗೆ ತುರುಕಿ, ಅದನ್ನು ಕೊಂಡೊಯ್ದು ಮುಂಬೈ-ಪುಣೆ ಹೆದ್ದಾರಿಯ ಸಮೀಪ ಇರುವ ನಿರ್ಜನ ಪ್ರದೇಶದಲ್ಲಿನ ಪೊದೆಯಲ್ಲಿ ಅದನ್ನು ಬಿಸಾಡಿ ಬಂದಿದ್ದರು. ಆನಂತರ ಅಮಾಯಕರಂತೆ ಬದುಕಲಾರಂಭಿಸಿದ್ದರು.
ಇದನ್ನೂ ಓದಿ: ಬಾಯ್ಫ್ರೆಂಡ್ಗಳನ್ನು ಓಡಿಸಿ ಬಾಲಕಿಯರ ಮೇಲೆ ಅತ್ಯಾಚಾರ, ವಿಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್ಮೇಲ್
ತಮ್ಮ ಪುತ್ರ ಮತ್ತು ಸೊಸೆ ಹಠಾತ್ತನೆ ಕಾಣೆಯಾಗಿದ್ದರಿಂದ ಆತಂಕಗೊಂಡ ಅಂಬುಜ್ ಅವರ ತಂದೆ ಮಹೇಂದ್ರ ತಿವಾರಿ ಅವರನ್ನು ಹುಡುಕಿಕೊಂಡು ಬಂದಿದ್ದರು. ಎಷ್ಟು ಹುಡುಕಿದರೂ ಸಿಗದಿದ್ದಾಗ ರಬಾಲೆ ಪೊಲೀಸ್ ಠಾಣೆಯಲ್ಲಿ ಪುತ್ರ ಮತ್ತು ಸೊಸೆ ಕಾಣೆಯಾಗಿರುವ ದೂರು ದಾಖಲಿಸಿದ್ದರು.
ಇವರ ಶೋಧ ಕಾರ್ಯ ಆರಂಭಿಸಿದ ಪೊಲೀಸರಿಗೆ ಅಂಬುಜ್ ತಿವಾರಿ ಘನ್ಸೋಲಿಯಲ್ಲಿ ಇರುವುದು ಪೊಲೀಸರಿಗೆ ಗೊತ್ತಾಗಿತ್ತು. ಅಲ್ಲಿಗೆ ಹೋಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನ ತನ್ನ ಪತ್ನಿಯನ್ನು ಕೊಂದು ಶವವನ್ನು ಬಿಸಾಡಿರುವುದಾಗಿ ಹೇಳಿದ. ಆತ ಹೇಳಿದ ಸ್ಥಳಕ್ಕೆ ಹೋಗಿ ಹುಡುಕಿದಾಗ ಪ್ಲಾಸ್ಟಿಕ್ ಡ್ರಂನಲ್ಲಿದ್ದ ನೀಲಂಳ ಶವ ಪತ್ತೆಯಾಗಿದೆ.
ರೌಡಿ ರೋಮಿಯೋಗಳ ಲೈಂಗಿಕ ಕಿರುಕುಳಕ್ಕೆ ಬೇಸತ್ತು ನೇಣು ಹಾಕಿಕೊಂಡ ಯುವತಿ