More

    ಕುಡಿಯುವ ನೀರು ಎಂದು ತಪ್ಪಾಗಿ ಆ್ಯಸಿಡ್​​ ಕುಡಿದ ವ್ಯಕ್ತಿ..

    ಮುಳ್ಳೂರು: ಕುಡಿದ ಮತ್ತಿನಲ್ಲಿ ಆಕಸ್ಮಿಕವಾಗಿ ಆ್ಯಸಿಡ್ ಸೇವಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.

    ಇದನ್ನೂ ಓದಿ: ಮತ್ತೊಂದು ಅಮಾನವೀಯ ಘಟನೆ: ಬೈಕ್​​ನ​ ಹಿಂಬದಿಗೆ ಮಂಚ ಕಟ್ಟಿ ಯುವಕನ ಮೃತದೇಹ ಹೊತ್ತೊಯ್ದ ಕುಟುಂಬಸ್ಥರು

    ಸಿದ್ದರಾಜು (40) ಎಂಬಾತನೇ ಮೃತದುರ್ದೈವಿಯಾಗಿದ್ದು, ಭಾನುವಾರದಂದು ಕುಡಿಯುವ ನೀರು ಎಂದು ತಪ್ಪಾಗಿ ಶೌಚಾಲಯ ಸ್ವಚ್ಛಗೊಳಿಸಲು ಬಳಸಿದ ಆ್ಯಸಿಡ್​​ನ್ನು ಸೇವಿಸಿದ್ದಾನೆ. ಕೆಲ ಹೊತ್ತಿನ ಬಳಿಕ ತೀವ್ರವಾದ ನೋವಿನಿಂದ ನರಳುತ್ತಿದ್ದ ಆತನ ಕಿರುಚಾಟವನ್ನು ಕೇಳಿ ಮನೆಯವರು ಹಾಗೂ ಗ್ರಾಮಸ್ಥರು ಸಹಾಯಕ್ಕಾಗಿ ಧಾವಿಸಿದ್ದು ಕೂಡಲೇ ಆತನನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸಿದ್ದರಾಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts