ಮುಂಬೈ: ಲಾಕ್ಡೌನ್ ಸಮಯದಲ್ಲಿ ಮನೆಯಿಂದ ಹೊರಹೋದ ಕಿರಿಯ ಸಹೋದರನನ್ನು ಕೊಲೆ ಮಾಡಿದ ಆರೋಪದಲ್ಲಿ 28 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಆರೋಪಿ ರಾಜೇಶ್ ಲಕ್ಷ್ಮಿ ಠಾಕೂರ್ ತನ್ನ ಸಹೋದರ ದುರ್ಗೇಶ್ನನ್ನು ಹತ್ಯೆ ಮಾಡಿದ್ದಾನೆ. ಸಾಕಷ್ಟು ಎಚ್ಚರಿಕೆ ನೀಡಿದರೂ ಅದನ್ನು ಮೀರಿ ಮನೆಯಿಂದ ಹೊರಹೋದಕ್ಕೆ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮುಂಬೈನ ಪಶ್ಚಿಮ ಉಪನಗರ ಕಂಡಿವಲಿಯಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ ಎಂದು ಸಮತಾ ನಗರದ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮೃತನು ಪುಣೆಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕರೊನಾ ಭೀತಿಯಿಂದಾಗಿ ತವರಿಗೆ ಮರಳಿದ್ದ. ಲಾಕ್ಡೌನ್ ಆದೇಶವಿದ್ದರೂ ಅದನ್ನು ಲೆಕ್ಕಿಸದೇ ಹೊರಗಡೆ ಹೋಗುತ್ತಿದ್ದ ದುರ್ಗೇಶ್ ಜತೆಗೆ ಆರೋಪಿ ಠಾಕೂರ್ ಮತ್ತು ಆತನ ಪತ್ನಿ ವಾಗ್ವಾದಕ್ಕೆ ಇಳಿದಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಚೂಪಾದ ಆಯುಧದಿಂದ ದುರ್ಗೇಶ್ ಮೇಲೆ ಠಾಕೂರ್ ದಾಳಿ ಮಾಡಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ದುರ್ಗೇಶ್ನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)
ಕರೊನಾ ವೈರಸ್ ನಮ್ಮಿಂದ ಹರಡಿದ್ದಲ್ಲ, ಹೊಸ ವರಸೆ ತೆಗೆದ ಚೀನಾ ಮಾಧ್ಯಮಗಳು!
‘ಕರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಶೀಘ್ರದಲ್ಲೇ ಜಯ ಸಾಧಿಸಲಿದೆ…ನಾವು ಏನು ಸಹಾಯ ಬೇಕಾದ್ರೂ ಮಾಡುತ್ತೇವೆ’ ಎಂದ ಚೀನಾ