More

    ಕರೊನಾ ಭೀತಿ: ಬೇಡವೆಂದರೂ ಮನೆಯಿಂದ ಹೊರಹೋದ ತಮ್ಮನನ್ನೇ ಕೊಲೆಗೈದ ಅಣ್ಣ

    ಮುಂಬೈ: ಲಾಕ್​ಡೌನ್​ ಸಮಯದಲ್ಲಿ ಮನೆಯಿಂದ ಹೊರಹೋದ ಕಿರಿಯ ಸಹೋದರನನ್ನು ಕೊಲೆ ಮಾಡಿದ ಆರೋಪದಲ್ಲಿ 28 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

    ಆರೋಪಿ ರಾಜೇಶ್​ ಲಕ್ಷ್ಮಿ ಠಾಕೂರ್​ ತನ್ನ ಸಹೋದರ ದುರ್ಗೇಶ್​ನನ್ನು ಹತ್ಯೆ ಮಾಡಿದ್ದಾನೆ. ಸಾಕಷ್ಟು ಎಚ್ಚರಿಕೆ ನೀಡಿದರೂ ಅದನ್ನು ಮೀರಿ ಮನೆಯಿಂದ ಹೊರಹೋದಕ್ಕೆ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮುಂಬೈನ ಪಶ್ಚಿಮ ಉಪನಗರ ಕಂಡಿವಲಿಯಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ ಎಂದು ಸಮತಾ ನಗರದ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಮೃತನು ಪುಣೆಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕರೊನಾ ಭೀತಿಯಿಂದಾಗಿ ತವರಿಗೆ ಮರಳಿದ್ದ. ಲಾಕ್​ಡೌನ್​ ಆದೇಶವಿದ್ದರೂ ಅದನ್ನು ಲೆಕ್ಕಿಸದೇ ಹೊರಗಡೆ ಹೋಗುತ್ತಿದ್ದ ದುರ್ಗೇಶ್​ ಜತೆಗೆ ಆರೋಪಿ ಠಾಕೂರ್​ ಮತ್ತು ಆತನ ಪತ್ನಿ ವಾಗ್ವಾದಕ್ಕೆ ಇಳಿದಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಚೂಪಾದ ಆಯುಧದಿಂದ ದುರ್ಗೇಶ್​ ಮೇಲೆ ಠಾಕೂರ್​ ದಾಳಿ ಮಾಡಿದ್ದಾನೆ.

    ರಕ್ತದ ಮಡುವಿನಲ್ಲಿ ಬಿದ್ದಿದ್ದ ದುರ್ಗೇಶ್​ನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

    ಕರೊನಾ ವೈರಸ್​ ನಮ್ಮಿಂದ ಹರಡಿದ್ದಲ್ಲ, ಹೊಸ ವರಸೆ ತೆಗೆದ ಚೀನಾ ಮಾಧ್ಯಮಗಳು!

    ‘ಕರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಶೀಘ್ರದಲ್ಲೇ ಜಯ ಸಾಧಿಸಲಿದೆ…ನಾವು ಏನು ಸಹಾಯ ಬೇಕಾದ್ರೂ ಮಾಡುತ್ತೇವೆ’ ಎಂದ ಚೀನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts