More

    ಮರಳೇಶ್ವರಸ್ವಾಮಿ ಅದ್ದೂರಿ ಬ್ರಹ್ಮರಥೋತ್ಸವ

    ಕೊಳ್ಳೇಗಾಲ : ಪಟ್ಟಣದಲ್ಲಿ ಶ್ರೀ ಮೀನಾಕ್ಷಿ ಸಮೇತ ಮರಳೇಶ್ವರಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ನೂರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.

    ರಥೋತ್ಸವ ಹಿನ್ನೆಲೆಯಲ್ಲಿ ಮರಳೇಶ್ವರಸ್ವಾಮಿ ಸನ್ನಿಧಿಯಲ್ಲಿ ಸ್ವಾಮಿಗೆ ರುದ್ರಾಭಿಷೇಕ, ರಥಸಂಪ್ರೋಕ್ಷಣೆ, ಬಲಿ ಪ್ರಧಾನ, ಬ್ರಹ್ಮ ರಥಪೂಜೆ, ಬ್ರಹ್ಮಕಳಸ ಸ್ಥಾಪನೆ, ನವಕಳಸ ಪೂಜೆ, ನವಕಳಸ ಅಭಿಷೇಕ ಪೂಜಾ ಕೈಂಕರ್ಯಗಳು ನೆರವೇರಿತು. ನಂತರ ದೇವಾಲಯದ ಸುತ್ತಲೂ ಉತ್ಸಹ ಮೂರ್ತಿಯನ್ನು ಪ್ರದಕ್ಷಿಣೆ ಮಾಡಿ ವಿವಿಧ ಹೂಗಳಿಂದ ಅಲಂಕೃತಗೊಳಿಸಲಾಗಿದ್ದ ರಥದಲ್ಲಿ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ, ಪಟ್ಟಣದ ರಥದ ಬೀದಿಯಲ್ಲಿ ಮೀನಾಕ್ಷಿ ಸಮೇತ ಮರಳೇಶ್ವರ ರಥೋತ್ಸವ ಸಾಗಿತು. ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ರಥವನ್ನು ಶ್ರದ್ಧಾ-ಭಕ್ತಿಯಿಂದ ಎಳೆದರು. ರಥದ ಬೀದಿಯಲ್ಲಿ ರಥೋತ್ಸವ ಸಾಗುವಾಗ ನಿವಾಸಿಗಳು ಹೂ, ಹಣ್ಣು-ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು.
    ಸಂಜೆ ದೇವಾಲಯದ ಎಲ್ಲ ಪೂಜಾ ಕೈಂಕರ್ಯಗಳನ್ನು ಪ್ರಧಾನ ಅರ್ಚಕ ಡಾ.ನಾಗೇಂದ್ರ ಭಟ್ ಹಾಗೂ ಸಹ ಅರ್ಚಕ ಶಿವರಾಮು ಅವರ ನೇತೃತ್ವದಲ್ಲಿ ನಡೆಯಿತು. ತಹಸೀಲ್ದಾರ್ ಮಂಜುಳಾ, ಕಸಬಾ ಆರ್‌ಐ ನಿರಂಜನ್, ಕಂದಾಯ ಇಲಾಖೆ ಸಿಬ್ಬಂದಿ ಸುಮನ್, ನಾಗೇಂದ್ರ, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಶೇಖರ್ ಶಾಸ್ತ್ರಿ, ರಮೇಶ್‌ಶಾಸ್ತ್ರಿ, ಅಚ್ಗಾಳ್ ನಾಗರಾಜಯ್ಯ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts