ಚಾಮರಾಜನಗರ: ಮಹಾಮಾರಿ ಕರೊನಾ ವೈರಸ್ ಆರ್ಭಟದಿಂದ ಜಾಗತಿಕವಾಗಿ ಆರ್ಥಿಕತೆ ನೆಲಕಚ್ಚಿದ್ದು, ಇದರ ಬಿಸಿ ಮಲೆ ಮಹದೇಶ್ವರ ಬೆಟ್ಟದ ಮಾದಪನ್ನ ಸನ್ನಿಧಿಗೂ ತಟ್ಟಿದೆ.
ಚಾಮರಾಜನಗರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಪ್ರತಿ ತಿಂಗಳು ಒಂದು ಕೋಟಿಗೂ ಅಧಿಕ ಹಣ ಸಂಗ್ರಹವಾಗುತ್ತಿತ್ತು. ಆದರೆ, ಈ ಭಾರಿ 96,27,988 ರೂಪಾಯಿ ನಗದು ಜೊತೆಗೆ 19 ಗ್ರಾಂ ಚಿನ್ನ, 1 ಕೆ.ಜಿ 900 ಗ್ರಾಂ ಬೆಳ್ಳಿ ಮಾತ್ರ ಸಂಗ್ರಹವಾಗಿದೆ.
ಇದನ್ನೂ ಓದಿ: ಇನ್ಸ್ಟಾಗ್ರಾಂ ಮಿತ್ರನಿಗಾಗಿ ಮನೆ ಬಿಟ್ಟ ಬಾಲಕಿ: ಬಲೆಗೆ ಬೀಳುವಷ್ಟರಲ್ಲಿ ಬಚಾವ್ ಆಗಿದ್ಹೇಗೆ?
ಈ ಬಾರಿ 6 ಯುಎಸ್ ಡಾಲರ್ ಜೊತೆಗೆ ಒಂದು ಹಳೆಯ ಕೈಗಡಿಯಾರವನ್ನು ಹುಂಡಿಗೆ ಹಾಕಿರುವುದು ವಿಶೇಷವಾಗಿದೆ. ಫೆ.29 ರಂದು ಹುಂಡಿಯನ್ನು ಕೊನೆಯದಾಗಿ ಎಣಿಕೆ ಮಾಡಲಾಗಿತ್ತು. ಸತತ ಮೂರು ತಿಂಗಳು ಕರೊನಾ ವೈರಸ್ನಿಂದ ಮಾದಪ್ಪನ ಸನ್ನಿಧಿಯನ್ನು ಬಂದ್ ಮಾಡಲಾಗಿತ್ತು. ಜೂನ್ 8 ರಂದು ಮುಂಜಾಗೃತ ಕ್ರಮಗಳೊದಿಂಗೆ ಮಾದಪ್ಪನ ಬಾಗಿಯಲು ತೆರೆಯಲಾಗಿತ್ತು.
ಪ್ರತಿ ತಿಂಗಳ ಭಕ್ತರ ಕಾಣಿಕೆಗೆ ಹೋಲಿಸಿದರೆ ಈ ಬಾರಿ ಕಡಿಮೆ ಹಣ ಹುಂಡಿಯಲ್ಲಿ ಸಂಗ್ರಹವಾಗಿದ್ದು, ಕರೊನಾ ಭೀತಿಗೆ ಸಾಕ್ಷಿಯಾಗಿದೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ಮದುವೆಗೆ 4 ದಿನ ಇರುವಾಗ್ಲೇ ಭಾವನಿಂದಲೇ ಮದುಮಗಳ ಹತ್ಯೆ: ಆರೋಪಿಯ ನಾಟಕ ಕೇಳಿದ್ರೆ ಶಾಕ್ ಆಗ್ತೀರಾ!
ರಜೆ ಬೇಕಾ, ತಗೊಳ್ಳಿ; ಸಂಬಳ ಮಾತ್ರ ಕೇಳ್ಬೇಡಿ; ನೌಕರರಿಗೆ ಕೆಎಸ್ಆರ್ಟಿಸಿ ಆಫರ್..!