ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ಅಸ್ಸಾಂನ ಗುವಾಹಟಿಯಲ್ಲೇ ಉಳಿದಿರುವ ಬಂಡಾಯ ಶಾಸಕರ ಪೈಕಿ ಮತ್ತೋರ್ವ ಸಚಿವ ಸೇರ್ಪಡೆಯಾಗಿದ್ದಾರೆ.
ಭಾನುವಾರ ಗುವಾಹಟಿಗೆ ತೆರಳಿರುವ ಸಚಿವ ರೆಬೆಲ್ ಶಾಸಕರ ಜತೆ ಕೈ ಜೋಡಿಸಿದ್ದಾರೆ. ಉನ್ನತ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದ ಉದಯ್ ಸಮಂತ್ ಅವರು ಭಾನುವಾರ ಸೂರತ್ ನಿಂದ ಗುವಾಹಟಿಗೆ ತೆರಳಿದ್ದಾರೆ.
ವಿಮಾನ ಪ್ರಯಾಣಿಕರ ಪಟ್ಟಿಯಲ್ಲಿ ಉದಯ್ ಸಮಂತ್ ಪ್ರಯಾಣ ಮಾಡಿರುವುದು ಖಚಿತಗೊಂಡಿದೆ. ಸದ್ಯ ಅಸ್ಸಾಂನಲ್ಲೇ ಬೀಡುಬಿಟ್ಟಿರುವ ಸಚಿವರ ಜತೆ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಶಾಸಕರ ಅನರ್ಹ ಕೋರಿ ನೋಟಿಸ್ ನೀಡಲಾಗಿದ್ದು, ನಾಳೆ ಸಂಜೆಯೊಳಗೆ ಶಾಸಕರು ಉತ್ತರಿಸಲೇಬೇಕಿದೆ. ಸದ್ಯ ಉದ್ಧವ್ ಠಾಕ್ರೆ ಅವರ ಸರ್ಕಾರದಿಂದ ಒಂದೊಂದೇ ಶಾಸಕರು ಹೊರಬರುತ್ತಿದ್ದು, ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. (ಏಜೆನ್ಸೀಸ್)