More

    ಮಹಾರಾಷ್ಟ್ರ ಸರ್ಕಾರ ಬಿಕ್ಕಟ್ಟು: ಸೇನೆಗೆ ಮತ್ತೊಂದು ಪೆಟ್ಟು, ಗುವಾಹಟಿಗೆ ಹಾರಿದ ಮತ್ತೊಬ್ಬ ಸಚಿವ!

    ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ಅಸ್ಸಾಂನ ಗುವಾಹಟಿಯಲ್ಲೇ ಉಳಿದಿರುವ ಬಂಡಾಯ ಶಾಸಕರ ಪೈಕಿ ಮತ್ತೋರ್ವ ಸಚಿವ ಸೇರ್ಪಡೆಯಾಗಿದ್ದಾರೆ.

    ಭಾನುವಾರ ಗುವಾಹಟಿಗೆ ತೆರಳಿರುವ ಸಚಿವ ರೆಬೆಲ್​​ ಶಾಸಕರ ಜತೆ ಕೈ ಜೋಡಿಸಿದ್ದಾರೆ. ಉನ್ನತ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದ ಉದಯ್​ ಸಮಂತ್​ ಅವರು ಭಾನುವಾರ ಸೂರತ್​ ನಿಂದ ಗುವಾಹಟಿಗೆ ತೆರಳಿದ್ದಾರೆ.

    ವಿಮಾನ ಪ್ರಯಾಣಿಕರ ಪಟ್ಟಿಯಲ್ಲಿ ಉದಯ್​ ಸಮಂತ್​ ಪ್ರಯಾಣ ಮಾಡಿರುವುದು ಖಚಿತಗೊಂಡಿದೆ. ಸದ್ಯ ಅಸ್ಸಾಂನಲ್ಲೇ ಬೀಡುಬಿಟ್ಟಿರುವ ಸಚಿವರ ಜತೆ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.

    ಈ ಮಧ್ಯೆ ಶಾಸಕರ ಅನರ್ಹ ಕೋರಿ ನೋಟಿಸ್​ ನೀಡಲಾಗಿದ್ದು, ನಾಳೆ ಸಂಜೆಯೊಳಗೆ ಶಾಸಕರು ಉತ್ತರಿಸಲೇಬೇಕಿದೆ. ಸದ್ಯ ಉದ್ಧವ್​ ಠಾಕ್ರೆ ಅವರ ಸರ್ಕಾರದಿಂದ ಒಂದೊಂದೇ ಶಾಸಕರು ಹೊರಬರುತ್ತಿದ್ದು, ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts