More

    ನಾನು ರೇಪ್​ ಮಾಡಿಲ್ಲ ಆದ್ರೆ… ಸಚಿವರ ಸ್ಫೋಟಕ ಹೇಳಿಕೆಯಿಂದ ಗಾಯಕಿ ಆರೋಪಕ್ಕೆ ಟ್ವಿಸ್ಟ್​!

    ಮುಂಬೈ: ಮಹಿಳೆಯೊಬ್ಬಳು ಮಾಡಿರುವ ಅತ್ಯಾಚಾರ ಆರೋಪವನ್ನು ತಳ್ಳಿಹಾಕಿರುವ ಮಹಾರಾಷ್ಟ್ರದ ಸಾಮಾಜಿಕ ಮತ್ತು ನ್ಯಾಯ ಸಚಿವ ಧನಂಜಯ್​ ಮುಂಡೆ, ಆರೋಪ ಮಾಡಿರುವ ಮಹಿಳೆಯ ಸಹೋದರಿ ಜತೆ 2003ರಿಂದಲೂ ಸಂಬಂಧ ಹೊಂದಿರುವುದಾಗಿ ಮಂಗಳವಾರ ಒಪ್ಪಿಕೊಂಡಿದ್ದಾರೆ.

    ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಎನ್​ಸಿಪಿ ನಾಯಕ ಧನಂಜಯ್​, 38 ವರ್ಷದ ಮಹಿಳೆ ಮತ್ತು ಆಕೆಯ ಸಹೋದರಿ ಬ್ಲ್ಯಾಕ್​ಮೇಲ್​ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಮತ್ತು ನನ್ನಿಂದ ಹಣವನ್ನು ಸುಲಿಗೆ ಮಾಡಿದ್ದಾರೆಂದು ಪ್ರತ್ಯಾರೋಪ ಮಾಡಿದ್ದಾರೆ. ತಾನು ಸಹ 2020ರ ನವೆಂಬರ್​ನಲ್ಲಿ ಪೊಲೀಸ್​ ದೂರು ದಾಖಲಿಸಿರುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿರಿ: ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದ ಯುವತಿಗಾಗಿ ಮಾರ್ಗ ಮಧ್ಯಯೇ ಕಾದಿದ್ದ ಜವರಾಯ!

    ಮಹಿಳೆಯೊಂದಿಗೆ 2003ರಿಂದಲೂ ಸಂಬಂಧದಲ್ಲಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದೇವೆ. ನಮ್ಮ ಸಂಬಂಧವನ್ನು ಅವರ ಕುಟುಂಬ ಸಹ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ. ಇತ್ತ ಮಹಿಳೆಯೊಂದಿಗೆ ಸಂಬಂಧ ಇರುವುದನ್ನು ಧನಂಜಯ್​ ಮುಂಡೆ ಒಪ್ಪಿಕೊಂಡ ಬೆನ್ನಲ್ಲೇ ಮಹಾರಾಷ್ಟ್ರ ಬಿಜೆಪಿ ಮಹಿಳಾ ವಿಭಾಗ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಗೆ ಪತ್ರ ಬರೆದು ಸಂಪುಟದಿಂದ ಧನಂಜಯ್​ರನ್ನು ತೆಗೆದು ಹಾಕಲು ಒತ್ತಾಯಿಸಿದೆ.

    ಘಟನೆಯ ಹಿನ್ನೆಲೆಗೆ ಬರುವುದಾದರೆ, ಜನವರಿ 11ರಂದು ಗಾಯಕಿ ರೇಣು ಶರ್ಮಾ ತನ್ನ ವಕೀಲರೊಂದಿಗೆ ಅಂಧೇರಿಯ ಒಶಿವರಾ ಪೊಲೀಸ್​ ಠಾಣೆಗೆ ಆಗಮಿಸಿ ಧನಂಜಯ್​ ಮುಂಡೆ ವಿರುದ್ಧ ರೇಪ್​ ದೂರು ದಾಖಲಿಸಿದ್ದರು. 1997ರಿಂದಲೂ ನನಗೆ ಧನಂಜಯ್​ ಪರಿಚಯವಿದೆ. ಮದುವೆಯಾಗುವುದಾಗಿ ಮತ್ತು ಬಾಲಿವುಡ್​ನಲ್ಲಿ ಗಾಯಕಿಯಾಗಲು ಸಹಾಯ ಮಾಡುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದರು.

    ಇದನ್ನೂ ಓದಿರಿ: ಅಂಕಲ್​ ಅಂತ್ಯಸಂಸ್ಕಾರ ಬಿಟ್ಟು ಒಂಟಿಯಾಗಿ ಮನೆಗೆ ಬಂದ ಯುವತಿ: ಪಾಲಕರಿಗೆ ಕಾದಿತ್ತು ಬಿಗ್​ ಶಾಕ್​!

    ಇನ್ನು ರೇಣು ಪರ ವಕೀಲ ರಮೇಶ್​ ತ್ರಿಪಾಠಿ ಎಂಬುವರು ಮಾತನಾಡಿ ದೂರು ದಾಖಲಾದ ದಿನದಿಂದ ಈವರೆಗೂ ಎಫ್​ಐಆರ್​ ದಾಖಲು ಮಾಡಿಲ್ಲ ಎಂದು ಆರೋಪಿಸಿದ್ದಾರೆ.

    2008ರಲ್ಲಿ ಮೊದಲ ಬಾರಿಗೆ ಧನಂಜಯ್​ ಮುಂಡೆ ರೇಪ್​ ಮಾಡಿದ್ದಾರೆ. ಮನೆಯಲ್ಲಿ ರೇಣು ಒಂಟಿಯಾಗಿರುವಾಗ ರೇಪ್​ ಮಾಡಿ, ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲಿಂದಾಚೆಗೆ ಅನೇಕ ಬಾರಿ ಕೃತ್ಯವೆಸಗಿದ್ದಾರೆ. 2019ರಲ್ಲಿ ಮದುವೆಯಾಗಲು ನಿರಾಕರಿಸಿದರು. ಏನಾದರೂ ಬಹಿರಂಗಪಡಿಸಿದರೆ, ವಿಡಿಯೋ ಸೋರಿಕೆ ಮಾಡುವುದಾಗಿ ಹೆದರಿಸುತ್ತಿದ್ದರು. ದೂರು ದಾಖಲಿಸಲಾಗಿದ್ದು, ಎಫ್​ಐಆರ್​ ದಾಖಲು ಮಾಡಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ರೇಣುಗೆ ಏನಾದರೂ ಆದರೆ ನ್ಯಾಯಾಲಯ ಮೆಟ್ಟಿಲೇರುತ್ತೇವೆ. ಮುಂದಾಗುವುದಕ್ಕೆಲ್ಲ ಧನಂಜಯ್​ ಅವರೇ ನೇರ ಹೊಣೆ ಎಂದು ವಕೀಲ ರಮೇಶ್ ತ್ರಿಪಾಠಿ ಹೇಳಿದ್ದಾರೆ.

    ಇದನ್ನೂ ಓದಿರಿ: ಮಗನ ದುರಾಸೆಗೆ ತಂದೆ ಬಲಿ: ಅಂತ್ಯಸಂಸ್ಕಾರ ಮಾಡ್ಬೇಕು ಎಲ್ಲಿದ್ರೂ ಬೇಗ ಬಾ ಮಗನೇ… ತಾಯಿಯ ಗೋಳಾಟ

    ಜ. 11ರಂದು ದೂರಿನ ಪ್ರತಿಯನ್ನು ಶೇರ್​ ಮಾಡಿ ಟ್ವೀಟ್​ ಮಾಡಿರುವ ರೇಣು ಶರ್ಮಾ, ನಾನು ಸಚಿವ ಧನಂಜಯ್​ ವಿರುದ್ಧ ಅತ್ಯಾಚಾರ ಮತ್ತು ಬೆದರಿಕೆ ಪ್ರಕರಣ ದಾಖಲಿಸಿದ್ದೇನೆ. ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಹಾರಾಷ್ಟ್ರ ಪೊಲೀಸರು ನನ್ನ ದೂರಿನ ಬಗ್ಗೆ ನಿರಾಸಕ್ತಿ ತೋರಿದ್ದಾರೆ ಎಂದು ಆರೋಪಿಸಿ ನನ್ನ ಜೀವ ಅಪಾಯದಲ್ಲಿದೆ ಸಹಾಯ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಪತ್ನಿ ಮಮತಾರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಅವರಿಗೂ ಟ್ಯಾಗ್​ ಮಾಡಿದ್ದಾರೆ. (ಏಜೆನ್ಸೀಸ್​)

    ಕೆಜಿಎಫ್ 2 ಟೀಸರ್​ ಬಿಡುಗಡೆ ಬೆನ್ನಲ್ಲೇ ಯಶ್​ಗೆ ಬಿಗ್​ ಶಾಕ್​- ನೋಟಿಸ್​ ನೀಡಿದ ಆರೋಗ್ಯ ಇಲಾಖೆ!

    ಕೆಲಸ ಮಾಡದಿದ್ದರೂ ಪ್ರತಿದಿನ ಕುಡಿದು ಬರುತ್ತಿದ್ದ ಮಗನನ್ನು ಕೊಂದ ಅಪ್ಪನಿಗೆ 7 ವರ್ಷ ಜೈಲು ಶಿಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts