ಬೆಂಗಳೂರು: ದಸರಾ ದರ್ಬಾರ್ ಎಂದೆನಿಸುವಂಥ ಕಾರ್ಬಾರ್ ರೀತಿಯ ಅದ್ದೂರಿ ಆಯುಧ ಪೂಜೆಗೆ ಇಲ್ಲೊಂದು ಬಂಗಲೆಯಂಥ ಮನೆ ಸಾಕ್ಷಿಯಾಗಿದೆ. ಅಂದಹಾಗೆ ಇಂಥ ಅದ್ದೂರಿ ಆಯುಧ ಪೂಜೆ ನಡೆದಿರುವುದು ಮಾಜಿ ಶಾಸಕ ಎಂ.ಟಿ.ಬಿ. ನಾಗರಾಜ್ ಅವರ ಮನೆಯಲ್ಲಿ.
ಮಹದೇವಪುರ ಬಳಿ ಹತ್ತಿರದ ಗರುಡಾಚಾರ್ ಪಾಳ್ಯದ ಆಶ್ರಯ ಬಡಾವಣೆಯಲ್ಲಿರುವ ಮನೆಯಲ್ಲಿ ಎಂ.ಟಿ.ಬಿ. ನಾಗರಾಜ್ ಅವರು, ತಮ್ಮಲ್ಲಿರುವ ಹತ್ತಾರು ಐಷಾರಾಮಿ ಕಾರುಗಳನ್ನು ಸಾಲಾಗಿ ನಿಲ್ಲಿಸಿ ಆಯುಧ ಪೂಜೆ ಮಾಡಿದ್ದಾರೆ.
ರೋಲ್ಸ್ ರಾಯ್ಸ್, ರೇಂಜ್ ರೋವರ್, ಮರ್ಸಿಡೆಸ್ ಬೆಂಜ್, ಟೊಯೊಟ ಫಾರ್ಚೂನರ್, ಇನ್ನೋವಾ ಮುಂತಾದ ಲಕ್ಸುರಿ ಕಾರುಗಳು, ಅತ್ಯಾಧುನಿಕ ಪಿಸ್ತೂಲ್ ಮುಂತಾದವನ್ನೆಲ್ಲ ಇರಿಸಿ, ಕುಟುಂಬಸ್ಥರೊಂದಿಗೆ ಆಯುಧ ಪೂಜೆ ಆಚರಿಸಿದ್ದಾರೆ ಎಂಟಿಬಿ.