More

    ಎಲ್ಲಿಯೂ ಲವ್ ಜಿಹಾದ್ ಕಾಣಿಸಿಲ್ಲ : ಗೃಹ ಸಚಿವ ಪರಮೇಶ್ವರ

    ತುಮಕೂರು: ಹುಬ್ಬಳ್ಳಿ ಘಟನೆಯಲ್ಲಿ ನನಗೆ ಎಲ್ಲಿಯೂ ಲವ್ ಜಿಹಾದ್ ಕಾಣಿಸಿಲ್ಲ ! ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಆ ಹೆಣ್ಣಮಗು ಪ್ರೀತಿ ನಿರಾಕರಿಸಿ ಆತನಿಂದ ದೂರ ಹೋಗಲು ಶುರು ಮಾಡಿದಾಗ ಆ ಹುಡುಗ ಹೋಗಿ ಚುಚ್ಚಿದ್ದಾನೆ. ಇದು ಗೃಹ ಸಚಿವ ಡಾ.ಜಿ.ಪರಮೇಶ್ವರ ತುಮಕೂರಿನಲ್ಲಿ ಪ್ರತಿಕ್ರಿಯಿಸಿರುವ ಪರಿ.

    ನಗರದ ಹೊರವಲಯದ ಸಿದ್ಧಾರ್ಥನಗರದ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಬಿಟ್ಟು ಬೇರೆ ಮದುವೆ ಮಾಡಿಕೊಳ್ಳುತ್ತಾಳೆ ಅಂದುಕೊಂಡು ಆ ಹುಡುಗ ಈ ರೀತಿ ಮಾಡಿದ್ದಾನೆ. ನನಗೆ ಇದರ ಪೂರ್ತಿ ಮಾಹಿತಿ ಗೊತ್ತಿಲ್ಲ. ಪರಸ್ಪರ ಪ್ರೀತಿ ಮೇಲೆ ಆಗಿರುವ ಘಟನೆ ಇದು. ಲವ್ ಜಿಹಾದ್ ಅನ್ನುವುದು ಕಾಣುತ್ತಿಲ್ಲ. ಸ್ವಾಭಾವಿಕವಾಗಿ ಇಂತಹ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ದೂಷಣೆ ಮಾಡುವುದು ಬಿಜೆಪಿಯವರ ಕೆಲಸ.ಅದು ಅಷ್ಟು ಸಮಂಜಸ ಅಲ್ಲ, ನಾವು ಕಾನೂನು ಪ್ರಕಾರ ಈ ಪ್ರಕರಣದ ತನಿಖೆ ನಡೆಸುತ್ತೇವೆ ಎಂದರು.

    ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡುವುದು ಈ ಚುನಾವಣೆ ಸಂದರ್ಭದಲ್ಲಿ ಒಳ್ಳೆಯದಲ್ಲ. ಇದೇ ಆಯಾಮದಲ್ಲಿ ತನಿಖೆ ಮಾಡಿ, ಈ ಸೆಕ್ಷನ್ ಹಾಕಿ ಎಂದು ಅವರು ಹೇಳಲಿಕ್ಕೆ ಆಗುವುದಿಲ್ಲ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಭಾರತೀಯ ದಂಡ ಸಂಹಿತೆ ಅಡಿ ಸೆಕ್ಷನ್ ಹಾಕುತ್ತಾರೆ. ಮಗಳನ್ನು ಹಿಂಬಾಲಿಸುತ್ತಿದ್ದ ತಾಯಿ ಮೇಲೂ ಹಲ್ಲೆ ಮಾಡಿದ್ದು ಅವರನ್ನು ರಕ್ಷಣೆ ಮಾಡಲಾಗಿದೆ. ಈ ಘಟನೆಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ, ಇಂತಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತದೆ. ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

    ಇವಿಎಂ ಮೇಲೆ ಅನುಮಾನ ಈಗಲೂ ಇದೆ
    ನಾವು ಮೊದಲಿನಿಂದಲೇ ಹೇಳುತ್ತಾ ಬಂದಿದ್ದೇವೆ. ಅಲ್ಲದೆ, ತಾಂತ್ರಿಕವಾಗಿಯು ಸಾಬೀತುಪಡಿಸಿದ್ದೇವೆ. ಕೇರಳಾದಲ್ಲಿ ಯಾವುದೇ ಬಟನ್ ಒತ್ತಿದರೂ ಬಿಜೆಪಿಗೆ ಮತ ಹೋಗುತ್ತಿದ್ದು ನಿರೂಪಿಸಲ್ಪಟ್ಟಿದೆ. ಅವರು ಎಲ್ಲಾ ಕ್ಷೇತ್ರದಲ್ಲಿ ಹಾಗೆ ಮಾಡಲ್ಲ..
    ತುಂಬಾ ಬುದ್ಧಿವಂತಿಕೆಯಿಂದ ಮಾಡುತ್ತಾರೆ. 150-200 ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಈ ರೀತಿ ಹ್ಯಾಕ್ ಮಾಡುವ ಅನುಮಾನಗಳು ಇವೆ.
    ಡಾ.ಜಿ.ಪರಮೇಶ್ವರ
    ಗೃಹ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts