ರಾಯಚೂರು: ಅದಿರು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದು, ಲಾರಿ ಚಾಲಕ ಜೀವಂತ ದಹನವಾಗಿದ್ದಾನೆ.
ಹೊರವಲಯದ ಬೈಪಾಸ್ ರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವ 3ರ ಸುಮಾರಿನಲ್ಲಿ ಈ ಅವಘಡ ಸಭಂವಿಸಿದೆ. ಲಾರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಕುಷ್ಟಗಿ ಮೂಲದ ಚಾಲಕ ಬಾಲಾಜಿ(25) ತಲೆಬುರುಡೆಯಷ್ಟೇ ಸಿಕ್ಕಿದೆ.
ಇದನ್ನೂ ಓದಿರಿ ಪಾಕ್ಗೆ ಇನ್ನೊಂದು ಆಘಾತ ನೀಡಲು ಸಜ್ಜಾಗಿದೆ ಭಾರತ: ಕೇಂದ್ರ ಸಚಿವ ಗಡ್ಕರಿ ನೀಡಿದ್ರು ಸುಳಿವು
ಬಳ್ಳಾರಿಯ ಮರಿಯಮ್ಮನ ಹಳ್ಳಿಯಿಂದ ತೆಲಂಗಾಣದ ಶಾದ್ ನಗರಕ್ಕೆ ಮೈನ್ಸ್ ತುಂಬಿಕೊಂಡು ಹೊರಟಿದ್ದ ಲಾರಿಯಲ್ಲಿ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದರ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿರಿ ಖಿನ್ನತೆಗೆ ಬಲಿಯಾದರೆ ಸುಶಾಂತ್? ಇವರ ಟ್ವಿಟರ್ ಕವರ್ ಪೇಜ್ನ ವರ್ಣಚಿತ್ರಕಾರನೂ ಗುಂಡಿಕ್ಕಿಕೊಂಡು ಸತ್ತಿದ್ದ!