More

    ಬಂಡಿವಡ್ಡರ ಫೌಂಡೇಷನ್‌ದಿಂದ ತರಕಾರಿ ಕಿಟ್ ವಿತರಣೆ

    ಲೋಕಾಪುರ: ಲಾಕ್‌ಡೌನ್‌ದಿಂದಾಗಿ ಗ್ರಾಮೀಣ ಭಾಗದ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಅಗತ್ಯ ವಸ್ತುಗಳು ಲಭಿಸದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು.

    ಪಟ್ಟಣದಲ್ಲಿ ಸತೀಶ ಬಂಡಿವಡ್ಡರ ಫೌಂಡೇಷನ್ ವತಿಯಿಂದ ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ತರಕಾರಿ ಪ್ಯಾಕೇಟ್ ವಿತರಿಸಿ ಅವರು ಮಾತನಾಡಿದರು.

    ಸಮಾಜ ಸೇವಕ ಹಾಗೂ ಕಾಂಗ್ರೆಸ್ ಧುರೀಣ ಸತೀಶ ಬಂಡಿವಡ್ಡರ ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಮನೆ ಮನೆಗೆ ತರಕಾರಿ ಕಿಟ್ ನೀಡುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

    ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, ಫೌಂಡೇಷನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹಾಂತೇಶ ಉದಪುಡಿ, ಫೌಂಡೇಷನ್ ಅಧ್ಯಕ್ಷ ಸತೀಶ ಬಂಡಿವಡ್ಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲೋಕಣ್ಣ ಕೊಪ್ಪದ, ತಾಪಂ ಸದಸ್ಯ ರಫೀಕ್ ಬೈರಕದಾರ್, ಪಿಕೆಪಿಎಸ್ ಅಧ್ಯಕ್ಷ ಆನಂದ ಹಿರೇಮಠ, ಸುಭಾಷ ಗಸ್ತಿ, ಗೋವಿಂದ ಕೌಲಗಿ, ಲಕ್ಷ್ಮಣ ಮಾಳಗಿ, ರಾಜು ಬಾಗವಾನ್, ಕುಮಾರ ಬಂಡಿವಡ್ಡರ, ಅಶೋಕ ದೊಡಮನಿ, ಹನುಮಂತ ಕಾಂಬಳೆ, ಮಹಾಂತೇಶ ಕಡಕೋಳಮಠ, ಮಹಾಂತೇಶ ಉದಪುಡಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts