More

    ಮಂಡ್ಯ ಚುನಾವಣಾ ಅಖಾಡಕ್ಕೆ ಎಚ್‌ಡಿಕೆ ಎಂಟ್ರಿ: ಮಾಜಿ ಸಿಎಂ ಪ್ರವಾಸದ ವೇಳಾಪಟ್ಟಿ ಇಲ್ಲಿದೆ ನೋಡಿ…!

    ಮಂಡ್ಯ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯೂ ಆದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಖಾಡ ಪ್ರವೇಶಿಸಿದ್ದಾರೆ.
    ಇತ್ತೀಚೆಗಷ್ಟೇ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೊಳಪಟ್ಟಿರುವ ಹಿನ್ನೆಲೆಯಲ್ಲಿ ಹಾಗೂ ತೀವ್ರ ಬಿಸಿಲ ಬೇಗೆ ಕಾರಣಕ್ಕೆ ಎಚ್.ಡಿ.ಕುಮಾರಸ್ವಾಮಿ ಆರೋಗ್ಯ ದೃಷ್ಟಿಯಿಂದ ಸಧ್ಯಕ್ಕೆ ಗ್ರಾಮಗಳಿಗೆ ಭೇಟಿ ನೀಡುವ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆನ್ನುವ ಮಾತು ಕೇಳಿಬರುತ್ತಿವೆ. ಈ ಕಾರಣಕ್ಕೆ ಸ್ಥಳೀಯ ನಾಯಕರು ಹೆಚ್ಚಿನ ಜವಾಬ್ದಾರಿ ಹೊರಬೇಕಿದೆ.
    ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ಎಂಟು ಕ್ಷೇತ್ರದ ಬಹಿರಂಗ ಸಭೆಯ ವೇಳಾಪಟ್ಟಿ ಹೊರಡಿಸಲಾಗಿದೆ. ಏ.16ರಂದು ಬೆಳಗ್ಗೆ 11ಗಂಟೆಗೆ ಮಳವಳ್ಳಿ, 17ರಂದು ಬೆಳಗ್ಗೆ 11ಗಂಟೆಗೆ ಕೆ.ಆರ್.ಪೇಟೆ, 18ರಂದು ಸಂಜೆ 4ಗಂಟೆಗೆ ಕೆ.ಆರ್.ನಗರ, 20ರಂದು ಸಂಜೆ 4ಗಂಟೆಗೆ ಮೇಲುಕೋಟೆ, 21ರಂದು ಬೆಳಗ್ಗೆ 11ಗಂಟೆಗೆ ಶ್ರೀರಂಗಪಟ್ಟಣ, 22ರಂದು ಬೆಳಗ್ಗೆ 11ಗಂಟೆಗೆ ನಾಗಮಂಗಲ, 23ರಂದು ಸಂಜೆ 5ಗಂಟೆಗೆ ಮದ್ದೂರು ಹಾಗೂ 24ರಂದು ಮಧ್ಯಾಹ್ನ 2ಗಂಟೆಗೆ ಮಂಡ್ಯದಲ್ಲಿ ಸಭೆ ಆಯೋಜಿಸಲಾಗಿದೆ. ಇನ್ನು ಬಹಿರಂಗ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಬಿಜೆಪಿಯ ನಾಯಕರು ಪಾಲ್ಗೊಳ್ಳಲಿದ್ದಾರೆನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts