ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಜನತಾ ಕ್ಯೂರ್ಫ್ಯೂಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಇನ್ನೊಂದತ್ತ ಕೆಲವರು ಅನಗತ್ಯವಾಗಿ ರಸ್ತೆಗಿಳಿದಿದ್ದು, ಅವರಿಗೆ ಪೊಲೀಸರು ಬಸ್ಕಿ ಶಿಕ್ಷೆ ಕೊಟ್ಟು ತಕ್ಕ ಪಾಠ ಕಲಿಸಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸುತ್ತಿದ್ದ ವೇಳೆ ಅನಗತ್ಯವಾಗಿ ಓಡಾಡಿ ಪೊಲೀಸರೊಂದಿಗೆ ಖ್ಯಾತೆ ತೆಗೆದ ಕೆಲ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರೆ, ಇನ್ನು ಕೆಲವರಿಗೆ ಬಸ್ಕಿ ಹೊಡೆಸಿ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ. ಟ್ರಿನಿಟಿ ವೃತ್ತದಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸುತ್ತಿದ್ದಾಗ ಸಿಕ್ಕಿ ಬಿದ್ದ ಕೆಲ ವಾಹನ ಸವಾರರಿಗೆ ಪೊಲೀಸರು ನಡು ರಸ್ತೆಯಲ್ಲೇ ಕೆಲ ಹೊತ್ತು ಬಸ್ಕಿ ತೆಗೆಸಿ ಎಚ್ಚರಿಕೆ ನೀಡಿದರು.
ಪೊಲೀಸರಿಗೆ ಅವಾಜ್:
ಇನ್ನು ಐಡಿ ಕಾರ್ಡ್ ಇಲ್ಲದೆ ಸಂಚರಿಸುತ್ತಿದ್ದ ಬೈಕ್ ಸವಾರನನ್ನು ತಡೆದು ಪ್ರಶ್ನಿಸಿದಕ್ಕೆ ಪೊಲೀಸರಿಗೆ ಆವಾಜ್ ಹಾಕಿದ ಪ್ರಕರಣವೂ ನಗರದ ಕೆಲವೆಡೆ ನಡೆದಿದೆ. ಜನತಾ ಕರ್ಫ್ಯೂ ವೇಳೆ ಯಾಕೆ ಓಡ್ತಾದ್ದಿಯಾ? ಎಂದು ಸವಾರನನ್ನು ಪೊಲೀಸರು ಪ್ರಶ್ನಿಸಿದ್ದಕ್ಕೆ, “ನೀವೆಲ್ಲರೂ ಯಾಕೆ ಇಲ್ಲೀದ್ದಿರಾ? ನಿಮಗೆ ಲಾಕ್ ಡೌನ್ ಇಲ್ವಾ?” ಎಂದು ಮರುಪ್ರಶ್ನಿಸಿ, “ನಿಮ್ಮ ತರಹ ನಮಗೂ ಕೆಲಸವಿದೆ. ಸುಮ್ಮನೆ ಒಡಾಡುತ್ತಿಲ್ಲ” ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾನೆ. ಆತನಿಗೆ ಪೊಲೀಸರು ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟು ವಾಹನ ಜಪ್ತಿ ಮಾಡಿದ್ದಾರೆ.
ನಿಮಿಷಕ್ಕೆ 27 ಲಕ್ಷ ಜನರ ನೋಂದಣಿ; ಕರೊನಾ ಲಸಿಕೆ ನೋಂದಣಿಗೆ ಮುಗಿಬಿದ್ದ ಜನ
ರಾಜ್ಯದಲ್ಲಿ ಕರೊನಾ ಮಹಾಸ್ಫೋಟ! ಒಂದೇ ದಿನ 39 ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆ