More

    ಭಾಗವತ ಪುರಾಣ ಆಲಿಸಿ

    ಇಳಕಲ್ಲ(ಗ್ರಾ): ನಗರದ ಮಹೇಶ್ವರಿ ಭವನದಲ್ಲಿ ಒಂದು ವಾರದ ಭಾಗವತ ಪುರಾಣಕ್ಕೆ ಶನಿವಾರ ಚಾಲನೆ ನೀಡಲಾಯಿತು.

    ದರಕ ಪರಿವಾರ ವತಿಯಿಂದ ಮಹೇಶ್ವರಿ ಸಮಾಜದ ಸಹಯೋಗದೊಂದಿಗೆ ಆರಂಭವಾಗಿರುವ ಈ ಭಾಗವತ ಪುರಾಣವನ್ನು ಸಮಾಜದ ಬಾಂಧವರು ಆಲಿಸಿ ಪುನೀತರಾಗಬೇಕು ಎಂದು ಹಿರಿಯರಾದ ವೇಣುಗೋಪಾಲ ದರಕ ಹೇಳಿದರು.

    ಪುರಾಣವನ್ನು ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಹೇಳುತ್ತಿದ್ದು, ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದವರು ಮನವಿ ಮಾಡಿದರು.
    ಭಾಗವತ ಆರಂಭಕ್ಕೂ ಮೊದಲು ಭಗವದ್ಗೀತೆಯ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ನಡೆಯಿತು.

    ಘನಶ್ಯಾಮ ದರಕ, ಬಾಲಕೃಷ್ಣ ದರಕ, ರಂಗಲಾಲ ದರಕ, ಕಮಲಕಿಶೋರ ದರಕ, ರಾಜಗೋಪಾಲ್ ದರಕ, ರಾಮಾನುಜ ದರಕ, ಪುರುಷೋತ್ತಮ ದರಕ ರಮೇಶ ದರಕ, ಶ್ಯಾಮಸುಂದರ ಡಾಗಾ, ಶ್ಯಾಮಸುಂದರ ಕರವಾ, ಪರಮಾನಂದ ಕರವಾ, ಗೋವಿಂದ ಕರವಾ, ಗೋಪಾಲ ಲಾಹೋಟಿ, ರಾಮ ಅವತಾರಡಾಲಿಯಾ ಹಾಗೂ ಮಹಿಳೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts