More

    ವಿಶಾಖಪಟ್ಟಣದ 13,000 ಟನ್ ವಿಷಾನಿಲ ಎಲ್ಲಿಗೆ ರವಾನೆಯಾಗುತ್ತಿದೆ ಗೊತ್ತಾ?

    ವಿಶಾಖಪಟ್ಟಣ: 11 ಜನರನ್ನು ಬಲಿ ಪಡೆದು, ಸಾವಿರಾರು ಜನರನ್ನು ಅಸ್ವಸ್ಥಗೊಳಿಸಿದ್ದ ಆರ್​.ಆರ್​. ವೆಂಕಟಾಪುರದ ಎಲ್​.ಜಿ. ಪಾಲಿಮರ್ಸ್​ ಕಾರ್ಖಾನೆಯ ವಿಷಾನಿಲವನ್ನು ಬೇರೆಡೆ ಸಾಗಿಸಲಾಗುತ್ತಿದೆ.

    ರಾಸಾಯನಿಕ ಕಾರ್ಖಾನೆಯಲ್ಲಿ ಎರಡು ಬೃಹತ್​ ಟ್ಯಾಂಕ್​ಗಳಲ್ಲಿ ಸ್ಟೈರೀನ್​ ಅನಿಲವನ್ನು ಸಂಗ್ರಹಿಸಿ ಇಡಲಾಗಿತ್ತು. ಮೇ 7ರ ಬೆಳಗಿನ ಜಾವ ಸೋರಿಕೆ ಉಂಟಾಗಿ 11 ಜನರನ್ನು ಬಲಿ ಪಡೆದಿತ್ತು. ಸುತ್ತಲಿನ ಐದು ಹಳ್ಳಿಗಳ ಜನರು ಅಸ್ವಸ್ಥರಾಗಿದ್ದರು.

    ಸೋರಿಕೆಯಾಗಿದ್ದ ಟ್ಯಾಂಕ್​ನಲ್ಲಿದ್ದ ವಿಷಾನಿಲವನ್ನು ಕಂಪನಿಯ ಮುಖ್ಯ ಕಚೇರಿ ಇರುವ ದಕ್ಷಿಣ ಕೊರಿಯಾದ ಸಿಯೋಲ್​ಗೆ ಸಾಗಿಸಲಾಗುತ್ತಿದೆ. ಇದಕ್ಕಾಗಿ ವಿಶೇಷ ಕಂಟೇನರ್​ ಟ್ಯಾಂಕ್​ವುಳ್ಳ ಹಡಗೊಂದು 8,000 ಟನ್​ ಸ್ಟೈರೀನ್​ ಅನಿಲವನ್ನು ತುಂಬಿಕೊಂಡು ಸಿಯೋಲ್​ನತ್ತ ಈಗಾಗಲೇ ಪ್ರಯಾಣ ಬೆಳೆಸಿದೆ. ಇನ್ನುಳಿದ ಅನಿಲ 5000 ಟನ್​ ಅನಿಲವನ್ನು ಇನ್ನೆರಡು ದಿನಗಳೊಳಗೆ ಸಾಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿ. ವಿನಯ್​ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ; ಕರೊನಾ ಲಸಿಕೆ ಸಂಶೋಧನೆ ಮಾಹಿತಿಗೆ ಚೀನಾ ಹ್ಯಾಕರ್​ಗಳಿಂದ ಕನ್ನ…!

    ಸದ್ಯ ಕಾರ್ಖಾನೆಯ ಇನ್ನೊಂದು ಟ್ಯಾಂಕ್​ ಹಾಗೂ ವಿಶಾಖಪಟ್ಟಣದ ಬಂದರಿನಲ್ಲಿರುವ ಮತ್ತೆರಡು ಟ್ಯಾಂಕ್​ಗಳಲ್ಲಿ ಸಿಂಗಾಪುರದಿಂದ ಆಮದು ಮಾಡಿಕೊಂಡ ಸ್ಟೈರೀನ್​ ಅನಿಲವನ್ನು ಸಂಗ್ರಹಿಸಿಡಲಾಗಿದೆ. ಆಂಧ್ರಪ್ರದೇಶ ಸರ್ಕಾರವು ಕೇಂದ್ರದೊಂದಿಗೆ ಮಾತುಕತೆ ನಡೆಸಿ ರಾಸಾಯನಿಕವನ್ನು ಸಿಯೋಲ್​ಗೆ ಕಳುಹಿಸಲು ವಿಶೇಷ ಹಡಗಿನ ವ್ಯವಸ್ಥೆ ಮಾಡಿತ್ತು.

    ಭಾರಿ ದುರಂತಕ್ಕೆ ಕಾರಣವಾಗಿದ್ದು ಸಣ್ಣ ಸೋರಿಕೆಯಷ್ಟೇ ಒಂದು, ಟ್ಯಾಂಕ್​ನಲ್ಲಿದ್ದ ಅನಿಲವೆಲ್ಲ ಸೋರಿಕೆಯಾಗಿದ್ದರೆ ಉಂಟಾಗುತ್ತಿದ್ದ ದುರಂತವನ್ನು ಊಹಿಸಲು ಸಾಧ್ಯವಿಲ್ಲ. ಭೋಪಾಲ್​ ಅನಿಲ ದುರಂತವನ್ನು ಮೀರಿಸುವ ಘಟನೆ ಇದಾಗುತ್ತಿತ್ತು.
    ಈ ನಡುವೆ, ದುರಂತದಲ್ಲಿ ಮೃತಪಟ್ಟ ಐವರ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ವಿತರಿಸಲಾಗಿದ್ದು, ಇನ್ನುಳಿದವರ ವಾರಸುದಾರರನ್ನು ಪತ್ತೆ ಹಚ್ಚಲಾಗುತ್ತಿದೆ.

    ಇದನ್ನೂ ಓದಿ; ಗಳಿಸಿದ್ದನ್ನೆಲ್ಲ ವ್ಯಯಿಸಿ, ಊರು ತಲುಪಿದರೂ ಮನೆಗೆ ಸೇರಿಸಲಿಲ್ಲ ಪತ್ನಿ..!

    ಕಾರ್ಖಾನೆಯನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಅವರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸುತ್ತಲಿನ ಐದು ಗ್ರಾಮಗಳಲ್ಲಿ ತಲಾ ಒಬ್ಬ ಸಚಿವರು ಗ್ರಾಮ ವಾಸ್ತ್ಯವ್ಯ ನಡೆಸುವಂತೆ ಸಿಎಂ ಜಗನ್​ಮೋಹನ್ ರೆಡ್ಡಿ ಸೂಚಿಸಿದ್ದಾರೆ.

    ಕರೊನಾದೊಂದಿಗೆ ಬದುಕಲು ಕಲಿಯಿರಿ, ಇನ್ನೆರಡು ವರ್ಷ ಲಸಿಕೆ ಅನುಮಾನ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts