ಬಳ್ಳಾರಿ: ಯುವ ವಕೀಲರೊಬ್ಬರು ಸೆಲ್ಫಿ ವಿಡಿಯೋ ಮಾಡಿ ಸೂಸೈಡ್ ಮಾಡಿಕೊಂಡಿದ್ದಾರೆ. ಬ್ಯಾಂಕ್ ಒಂದರಲ್ಲಿ ಲೀಗಲ್ ಅಡ್ವೈಸರ್ ಆಗಿದ್ದ ವಕೀಲ ವಿಷ ಸೇವಿಸುವ ಲೈವ್ ದೃಶ್ಯ ಅವರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಮೃತಪಟ್ಟ ಸ್ಥಳದಲ್ಲಿ ಡೆಟ್ನೋಟ್ ಕೂಡ ಸಿಕ್ಕಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ಮೂಲದ ವಕೀಲ ಮಹೇಶ್ (28) ಆತ್ಮಹತ್ಯೆ ಮಾಡಿಕೊಂಡವರು. ಹೊಸಪೇಟೆಯ ಬಳ್ಳಾರಿ ಸರ್ಕಲ್ನಲ್ಲಿರುವ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಲೀಗಲ್ ಅಡ್ವೈಸರ್ ಆಗಿದ್ದರು. ಅವರ ಸಾವಿಗೆ ಕಾರಣ ಏನೆಂದು ಸ್ಥಳದಲ್ಲಿ ಸಿಕ್ಕ ಡೆತ್ನೋಟ್ನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿರಿ ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!
ನನ್ನ ಸಾವಿಗೆ ಬ್ಯಾಂಕ್ ಮೇಲಧಿಕಾರಿಗಳ ಕಿರುಕುಳವೇ ಕಾರಣ ಎಂದು ವಕೀಲ ಮಹೇಶ್ ಡೆತ್ನೋಟ್ ಬರೆದಿಟ್ಟು ವಿಷ ಕುಡಿದು ಸತ್ತಿದ್ದಾರೆ. ಈಕ್ವಿಟಾಸ್ ಬ್ಯಾಂಕ್ನ ಡಿಡಿಎಂ ರಾಘವೇಂದ್ರ, ಜನರಲ್ ಮ್ಯಾನೇಜರ್ ರಮೇಶ್, ಬಸವರಾಜ್, ಬ್ರಾಂಚ್ ಮ್ಯಾನೇಜರ್ ಏಕಾಂತಪ್ಪ ಅವರೇ ನನ್ನ ಸಾವಿಗೆ ಕಾರಣ. ದಾಖಲೆಗಳು ಸರಿಯಾಗಿ ಇಲ್ಲದಿದ್ದರೂ ಲೋನ್ ಕೊಡಲು ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದರು ಎಂದು ಮಹೇಶ್ ಆರೋಪಿಸಿದ್ದಾರೆ.
ದೇವರಿಗೆ ಕೈಮುಗಿಯುತ್ತಿದ್ದಾಗಲೇ ವ್ಯಕ್ತಿಯ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ!