ನವದೆಹಲಿ: ಪಾಕಿಸ್ತಾನ ಭಯೋತ್ಪಾದನಾ ವಿರೋಧಿ ಕೋರ್ಟ್ನಿಂದ ಶಿಕ್ಷೆಗೆ ಒಳಗಾಗಿರುವ ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಸಯೀದ್ನನ್ನು ಜೈಲಿಗೆ ಕಳುಹಿಸುವ ನಿರ್ಧಾರವನ್ನು ಅಲ್ಲಿನ ಸರ್ಕಾರ ತೆಗೆದುಕೊಳ್ಳುವುದೇ ಎಂದು ಕೇಂದ್ರ ಸರ್ಕಾರಿ ಮೂಲಗಳು ಪ್ರಶ್ನಿಸಿವೆ.
ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಅಲ್ಲಿನ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಜಾಗತಿಕ ಕಾವಲು ಸಂಸ್ಥೆ ಕೆಲವೆ ದಿನಗಳಲ್ಲಿ ಪರಿಶೀಲನೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಪಾಕ್ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ ಎಂದು ಭಾರತ ತಿಳಿಸಿದೆ.
2008 ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಸಯೀದ್ಗೆ ಭಯೋತ್ಪಾದಕ ಹಣಕಾಸು ಅವ್ಯವಹಾರ ಸಂಬಂಧದ ಎರಡು ಪ್ರಕರಣಗಳಲ್ಲಿ 11 ವರ್ಷಗಳ ಜೈಲು ಶಿಕ್ಷೆಯನ್ನು ಪಾಕಿಸ್ತಾನ ಭಯೋತ್ಪಾದನ ವಿರೋಧಿ ನ್ಯಾಯಾಲಯ ಬುಧವಾರ ವಿಧಿಸಿದೆ. ಅಲ್ಲದೆ ಜಾಗತಿಕ ವಾಚ್ಡಾಗ್ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಉಗ್ರ ಹಫೀಜ್ಗೆ ಶಿಕ್ಷೆ ವಿಧಿಸಲು ಕೇವಲ ನಾಲ್ಕು ದಿನಗಳು ಮಾತ್ರ ಇವೆ. ಹೀಗಾಗಿ ಪಾಕ್ ಸರ್ಕಾರ ಏನು ಮಾಡುತ್ತದೆ ಎಂದು ನೋಡಬೇಕು ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಎಫ್ಎಟಿಎಫ್ ಭಯೋತ್ಪಾದನಾ ವಿರೋಧಿ ಕ್ರಿಯಾ ಯೋಜನೆ ರೂಪಿಸಿ ಫೆಬ್ರವರಿ 2020 ರೊಳಗೆ ಸಂಪೂರ್ಣವಾಗಿ ಜಾರಿಗೆ ತರಬೇಕು. ಅಲ್ಲದೆ ಉಗ್ರರನ್ನು ಶಿಕ್ಷಿಸಬೇಕು ಎಂದು ಪಾಕ್ಗೆ ಕೋರಿತ್ತು. ಆದರೆ ಎಫ್ಎಟಿಎಫ್ನ ಕ್ರಿಯಾ ಯೋಜನೆ ಜಾರಿಗೆ ತರಲು ಪಾಕ್ ವಿಫಲವಾದ ಹಿನ್ನೆಲೆಯಲ್ಲಿ ಆ ರಾಷ್ಟ್ರವನ್ನು ಬೂದು ಪಟ್ಟಿಗೆ ಸೇರಿಸಲಾಗಿದೆ.
“ಎಫ್ಎಟಿಎಫ್ ಸಭೆ ನಡೆಯುವ ನಡೆಯುವ ಹಿನ್ನೆಲೆಯಲ್ಲಿ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಹೀಗಾಗಿ ಇದನ್ನು ಭಾರತ ಗಮನಿಸುತ್ತಿದೆ. ಪಾಕ್ ಸರ್ಕಾರ ಅಂತಿಮವಾಗಿ ಯಾವ ನಿರ್ಧಾರ ಮಾಡುತ್ತದೆ ಎಂದು ಕಾದು ನೋಡಬೇಕಾಗಿದೆ ಎಂದು ಭಾರತ ಹೇಳಿದೆ. (ಏಜೆನ್ಸೀಸ್)