ಕಳಸ: ಹೊರನಾಡು ಗ್ರಾಮದಲ್ಲಿ ಲ್ಯಾಂಪ್ಸ್ ಸಹಕಾರ ಸಂಘದ ಕಟ್ಟಡದ ಉದ್ಘಾಟನೆಯನ್ನು ಹೊರನಾಡು ದೇವಸ್ಥಾನದ ಧರ್ಮಕರ್ತ ಡಾ. ಜಿ.ಭೀಮೆಶ್ವರ ಜೋಷಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಹಕಾರ ಸಂಘದ ಮೂಲ ಉದ್ದೇಶ ಅರಣ್ಯ ಉತ್ಪನ್ನ ಸಂಗ್ರಹಿಸುವುದು. ಹೊರನಾಡಿನ ಈ ಘಟಕವು ಅಂತಹ ಉತ್ಪನ್ನಗಳ ಸಂಗ್ರಹದಲ್ಲಿ ಮಾದರಿಯಾಗಲಿ ಎಂದರು.
ಈವರೆಗೆ ಹೊರನಾಡು ಗ್ರಾಪಂ ಕಟ್ಟಡದಲ್ಲಿ ನಡೆಯುತ್ತಿದ್ದ ಸಹಕಾರ ಸಂಘಕ್ಕೆ ಸ್ವಂತ ಕಟ್ಟಡ ಹೊಂದಲು ನಿವೇಶನ ನೀಡುವುದಾಗಿ ಈ ಹಿಂದೆ ಭೀಮೇಶ್ವರ ಜೋಷಿ ವಾಗ್ದಾನ ಮಾಡಿದ್ದರು. ಅದರಂತೆ ಸಂಘಕ್ಕೆ 1200 ಚ. ಅಡಿಯ ನಿವೇಶನ ನೀಡಿದ್ದರು. ರಾಜ್ಯ ಸರ್ಕಾರದ 25 ಲಕ್ಷ ರೂ. ಅನುದಾನದಲ್ಲಿ ಸಂಘಕ್ಕೆ ಸುಸಜ್ಜಿತ ಕಟ್ಟಡ ನಿರ್ವಿುಸಲಾಗಿದೆ.
ಲ್ಯಾಂಪ್ಸ್ ಅಧ್ಯಕ್ಷ ಸತೀಶ್, ನಿರ್ದೇಶಕರಾದ ಯಶೋದಾ, ರಜನಿ, ಸುಂದರ್ಕುಮಾರ್, ವಸಂತ, ಮುತ್ತಪ್ಪ, ರಾಮು, ಅರಿಂಜಯ ಇದ್ದರು.