More

    Lakhimpur Kheri Case: ಪೊಲೀಸರ ಮುಂದೆ ಹಾಜರಾದ ಗೃಹ ಸಚಿವರ ಪುತ್ರ; ವಿಚಾರಣೆ ಶುರು

    ಲಖನೌ: ಉತ್ತರಪ್ರದೇಶದ ಲಖೀಂಪುರ್​ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಹಾಯಿಸಿದ ಆರೋಪ ಎದುರಿಸುತ್ತಿರುವ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರ ಅವರ ಮಗ ಆಶಿಶ್ ಮಿಶ್ರ ಇಂದು (ಅಕ್ಟೋಬರ್ 9) ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣದ ತನಿಖೆಗೆ ರಚಿಸಲಾಗಿರುವ ಎಸ್​ಐಟಿ ಅಧಿಕಾರಿಗಳು ಬೆಳಿಗ್ಗೆ 11 ಕ್ಕೆ ವಿಚಾರಣೆ ಆರಂಭಿಸಿದ್ದಾರೆ.

    ಅಕ್ಟೋಬರ್ 3 ರಂದು ನಡೆದ ಘಟನೆಯಲ್ಲಿ ನಾಲ್ಕು ರೈತರು, ಒಬ್ಬ ಪತ್ರಕರ್ತ ಸೇರಿದಂತೆ ಒಟ್ಟು ಎಂಟು ಜನ ಸಾವಪ್ಪಿದ್ದಾರೆ. ಈ ಸಂಬಂಧವಾಗಿ ಆಶಿಶ್​ ಮಿಶ್ರ ವಿರುದ್ಧ ಅ.4ರಂದೇ ಕೊಲೆಯ ಆರೋಪದ ಎಫ್​.ಐ.ಆರ್. ದಾಖಲಾಗಿದ್ದರೂ, ಅ.7 ರಂದು ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಈ ಸಮನ್ಸ್​ ಕೂಡ ಸಾಕ್ಷಿದಾರರಿಗೆ ನೀಡಲಾಗುವ ಕ್ರಿಮಿನಲ್​ ಪ್ರೊಸೀಜರ್ ಕೋಡ್​ನ ಸೆಕ್ಷನ್ 160 ರಡಿಯ ನೋಟೀಸಾಗಿದೆ ಎನ್ನಲಾಗಿದೆ. ಆದಾಗ್ಯೂ ವಿಚಾರಣೆಯ ವೇಳೆ ಮಿಶ್ರಾರ ಹೇಳಿಕೆಗಳ ಆಧಾರದ ಮೇಲೆ ಅವರನ್ನು ಬಂಧಿಸುವ ಅವಕಾಶ ಕಾನೂನಿನಲ್ಲಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಚಿವ ಅಜಯ್​ ಕುಮಾರ್​ ಮಿಶ್ರ ಅವರು, ರೈತರ ಮೇಲೆ ಹಾದುಹೋದ ವಾಹನ ತಮಗೆ ಸೇರಿದ್ದಾದರೂ, ತಮ್ಮ ಮಗ ಆ ಕಾರಿನಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ. ನಿನ್ನೆ ವಿಚಾರಣೆಗೆ ಹಾಜರಾಗದ ಆಶಿಶ್ ಮಿಶ್ರ ಇಂದು ಪೊಲೀಸರ ಮುಂದೆ ಪ್ರತ್ಯಕ್ಷವಾಗಿದ್ದು, ಬಿಗಿಭದ್ರತೆಯಲ್ಲಿ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ. ಮೃತರ ಮೇಲೆ ಹಾದುಹೋದ ವಾಹನದಲ್ಲಿ ಇದ್ದರೆನ್ನಲಾಗಿರುವ ಲವ್​ ಕುಶ್​ ಮತ್ತು ಆಶಿಶ್ ಪಾಂಡೆ ಎಂಬುವರನ್ನು ಅ. 7ರಂದು ಬಂಧಿಸಲಾಗಿದೆ. (ಏಜೆನ್ಸೀಸ್)

    ಮೈಸೂರು ಕೋರ್ಟ್‌ನಲ್ಲಿ ಬಾಂಬ್ ಸ್ಫೋಟ: ಬೇಸ್ ಮೂವ್‌ಮೆಂಟ್ ಉಗ್ರರು ಅಪರಾಧಿಗಳು

    ‘ಲಖೀಂಪುರ್​ ಆಧಾರದಲ್ಲಿ ವಿರೋಧ ಪಕ್ಷಗಳ ಪುನಶ್ಚೇತನ ಯತ್ನಕ್ಕೆ ನಿರಾಶೆ ಕಾದಿದೆ’ ಎಂದ ಪ್ರಶಾಂತ್​ ಕಿಶೋರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts