ಲಖನೌ: ಉತ್ತರಪ್ರದೇಶದ ಲಖೀಂಪುರ್ ಖೇರಿ ಸಾವುನೋವುಗಳ ಪ್ರಕರಣದಲ್ಲಿ ರಾಜ್ಯದ ಪೊಲೀಸರು ನಾಲ್ಕನೇ ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯ ವೇಳೆ ರೈತರ ಮೇಲೆ ಹಾದುಹೋಯಿತೆನ್ನಲಾದ ಸಚಿವಪುತ್ರನ ಕಾರಿನ ಹಿಂದೆಯೇ ಹೋದ ಮತ್ತೊಂದು ಎಸ್ಯುವಿಯ ಚಾಲಕ ಶೇಖರ್ ಭಾರತಿ, ಬಂಧಿತ ವ್ಯಕ್ತಿ.
ಅ.3 ರಂದು ನಡೆದ ಘಟನೆಯಲ್ಲಿ ಎಂಟು ಜನರು ಮೃತಪಟ್ಟಿದ್ದರು. ರಸ್ತೆಯನ್ನು ಅಡ್ಡಗಟ್ಟಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾರ ಮಗ ಆಶಿಶ್ ಮಿಶ್ರ ಕಾರು ಹಾಯಿಸಿದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ಸೂಕ್ತ ಉತ್ತರಗಳನ್ನು ನೀಡಿಲ್ಲ ಎಂದು ಅದಾಗಲೇ ಆಶಿಶ್ರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಕಂದಾಯ ನಿರೀಕ್ಷಕಿ ಆತ್ಮಹತ್ಯೆ! ಮಹತ್ತರ ಕನಸು ಕಂಡಿದ್ದವಳ ಬಾಳಲ್ಲಿ ದುರಂತ
ಇದೀಗ ಮಿಶ್ರರ ಬಿಳಿ ಜೀಪಿನ ಹಿಂದೆಯೇ ತೆರಳಿತೆನ್ನಲಾದ ಬ್ಲ್ಯಾಕ್ ಫಾರ್ಚೂನರ್ ಕಾರಿನಲ್ಲಿ ರಾಜ್ಯಸಭಾ ಸಂಸದ ಅಖಿಲೇಶ್ ದಾಸ್ ಸೋದರಳಿಯ ಹಾಗೂ ಆಶಿಶ್ ಮಿಶ್ರಾರ ಆಪ್ತ ಅಂಕಿತ್ ದಾಸ್, ಸುಮಿತ್ ಜೈಸ್ವಾಲ್ ಮತ್ತು ಬಂಧಿತ ಚಾಲಕ ಶೇಖರ್ ಭಾರತಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಶೇಖರ್ ಭಾರತಿಯನ್ನು ಬಂಧಿಸಿರುವ ಯುಪಿ ಪೊಲೀಸರು, ಅಂಕಿತ್ ದಾಸ್ನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಯುಪಿ ಪೊಲೀಸರು ಬಂಧಿಸಿರುವ ಇತರ ಈರ್ವರೆಂದರೆ ಲವ್ ಕುಶ್ ಮತ್ತು ಆಶಿಶ್ ಪಾಂಡೆ. ಪ್ರಕರಣದಲ್ಲಿ ಇನ್ನೂ 15 ರಿಂದ 20 ಗುರುತಿಲ್ಲದ ಜನರೂ ಆರೋಪಿಗಳಾಗಿದ್ದಾರೆ. (ಏಜೆನ್ಸೀಸ್)
ಆಧಾರ್ ಕಾರ್ಡ್ನೊಂದಿಗೆ ವಾಸಿಸುತ್ತಿದ್ದ ಪಾಕಿಸ್ತಾನಿ ಭಯೋತ್ಪಾದಕನ ಬಂಧನ
ಕೆರೆ ಕೋಡಿ ಬಿದ್ದು ಹರಿದುಹೋದ ಮೀನುಗಳು… ಗುತ್ತಿಗೆದಾರರ ಬದುಕು ಹೈರಾಣ