More

    ಪಂಚಾಗ ಪಠಣ ಕಾರ್ಯಕ್ರಮ

    ಕುರುಗೋಡು: ಪಟ್ಟಣದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯೋಜಿಸಿದ್ದ ಶುಭಕೃತ್ ನಾಮ ಸಂವತ್ಸರದ ಹೊಸ ಪಂಚಾಗ ಪಠಣ ಕಾರ್ಯಕ್ರಮವನ್ನು ವೆಂಕಟೇಶ್ ಜೋಶಿ ನೆರವೇರಿಸಿದರು.

    ಈ ವರ್ಷಕ್ಕೆ ಶನಿ ರಾಜನಾಗಿದ್ದಾನೆ. ಶುಭಕೃತ್ ಎಂದರೆ ಒಳ್ಳೆಯದು ಎಂದರ್ಥ. ಈ ವರ್ಷ ಎಲ್ಲವೂ ಶುಭವಾಗುತ್ತವೆ. ಉತ್ತಮ ಮಳೆ, ಬೆಳೆ ಆಗಲಿದ್ದು, ಅದಕ್ಕೆ ತಕ್ಕಂತೆ ಬೆಲೆ ದೊರೆಲಿದೆ. ಅನಾಹುತಗಳ ಸಂಭವ ಕಡಿಮೆ ಇದ್ದರೂ, ದೇಶದಲ್ಲಿ ಸಣ,್ಣ ಪುಟ್ಟ ಅಪರಾಧ ಕೃತ್ಯಗಳು ಜರುತ್ತವೆ. ರೈತರು ಈ ಬಾರಿ ಕಪ್ಪು ಭೂಮಿಯಲ್ಲಿ ಹೆಚ್ಚು ಕಪ್ಪು ಬೆಳೆಗಳನ್ನು ಬೆಳೆಯಲಿದ್ದಾರೆ. ಕೆಂಪು ಭೂಮಿಯಲ್ಲಿ ಬೆಳೆಯುವ ಕೆಂಪು ಬೆಳೆಗಳಿಗೆ ಒಳ್ಳೆಯ ದರ ಸಿಗಲಿದೆ. ಈ ಬಾರಿ ಹಿಂಗಾರು ಮತ್ತು ಮುಂಗಾರು ಮಳೆಗಳು ಸಮವಾಗಿರಲಿವೆ ಬರಲಿವೆ. ಆದರೆ, ಯುದ್ಧಗಳಿಂದ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಲಿವೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts