More

    ಕುರ್ಲಾನ್​ ಕಾರ್ಖಾನೆಗೆ ಬೆಂಕಿ; ಪಾರಾದ ಕಾರ್ಮಿಕರು

    ಬೆಂಗಳೂರು: ನೆಲಮಂಗಲ ತಾಲೂಕಿನ ಟಿ. ಬೇಗೂರಿನ ಬಳಿ ಇರುವ ಕುರ್ಲಾನ್ ಕಾರ್ಖಾನೆಗೆ ಇದ್ದಕ್ಕಿಂದತೆ ಬೆಂಕಿ ತಗುಲಿದೆ. ಬೆಂಕಿ ಬೀಳುತ್ತಿದ್ದಂತೆ ಕಾರ್ಮಿಕರೆಲ್ಲರೂ ಹೊರ ಬಂದಿದ್ದಾರೆ.

    ಕುರ್ಲಾನ್ ಕಾರ್ಖಾನೆಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಹೈಟೆನ್ಶನ್ ವೈಯರ್ ಕಾರ್ಖಾನೆ ಮೇಲೆ‌ ಬಿದ್ದ ಕಾರಣ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

    ಕುರ್ಲಾನ್ ಕಾರ್ಖಾನೆ ಅಕ್ಕ-ಪಕ್ಕದಲ್ಲಿ ಆಯಿಲ್ ಮುಂತಾದ ಕಾರ್ಖಾನೆಯಿದ್ದು, ಜನರಲ್ಲಿ ಆತಂಕ ಎಡೆಮಾಡಿದೆ. ನೆಲಮಂಗಲ ಅಗ್ನಿಶಾಮಕ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts