More

    ಕೋರಂ ಕೊರತೆಯಿಂದ ಸಾಮಾನ್ಯ ಸಭೆ ಮುಂದಕ್ಕೆ

    ಕುಕನೂರು: ಸ್ಥಳೀಯ ಪಪಂ ಕಚೇರಿಯಲ್ಲಿ ಗುರುವಾರ ನಡೆಯಬೇಕಿದ್ದ ಸಾಮಾನ್ಯ ಸಭೆಗೆ ಕೋರಂ ಕೊರತೆ ಎದುರಾಗಿ, ಸಭೆ ಮುಂದುಡಲಾಗಿದೆ.
    ಮುಂಚಿತವಾಗಿ ಬಂದಿದ್ದ ಪಪಂ ಸಿಬ್ಬಂದಿ, ಸದಸ್ಯರಿಗೆ ದೂರವಾಣಿ ಕರೆ ಮಾಡಿ, ಸಭೆ ಇದೆ ಬನ್ನಿ ಗೋಗರೆಯುತ್ತಿರುವುದು ಕಂಡು ಬಂತು. 3-4 ಸದಸ್ಯರು ಬಂದರು. ಉಳಿದವರು ಬರಲಿಲ್ಲ. ಹೀಗಾಗಿ ಕೋರಂ ಕೊರತೆ ಎದುರಾಯಿತು. ವಿಧಿಯಿಲ್ಲದೇ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.


    ಕುಕನೂರು ಪಪಂ ಕಚೇರಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಸಭೆ ಕರೆಯಲಾಗಿತ್ತು. ಕೋರಂ ಕೊರತೆ ಉಂಟಾದ ಕಾರಣ ಸಭೆ ಮುಂದೂಡಲಾಗಿದೆ. ವಿಚಾರಿಸಿ ನೋಡಲಾಗಿ, ಪಟ್ಟಣದಲ್ಲಿ ಗಣ್ಯ ವ್ಯಕ್ತಿಯೊಬ್ಬರು ತೀರಿಕೊಂಡ ಕಾರಣ ಸಭೆಗೆ ಬಾರದ ಸದಸ್ಯರು ಅಲ್ಲಿಗೆ ತೆರಳಿರುವುದು ಗೊತ್ತಾಯಿತು.
    | ಶ್ರೀಶೈಲಗೌಡ ಪಪಂ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts