More

    ಐದನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್​; ಮುಖ್ಯಮಂತ್ರಿ ಎದುರಿನ ಅಭ್ಯರ್ಥಿ ಬದಲು

    ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವನೆ ನಿಮಿತ್ತ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್​ ತನ್ನ ಅಬ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಇನ್ನು ಐದನೇ ಪಟ್ಟಿಯಲ್ಲಿ ಕಾಂಗ್ರೆಸ್​ ಅಚ್ಚರಿಯ ಅಭ್ಯರ್ಥಿಗಳನ್ನು ಘೋಷಿಸಿದ್ದು ನಿರೀಕ್ಷೆಯಂತೆ ಪುಲಕೇಶಿನಗರದ ಟಿಕೆಟ್​ ಶಾಸಕ ಅಖಂಡ ಶ್ರೀನಿವಾಸ್​ ಅವರ ಕೈ ತಪ್ಪಿದೆ.

    ಮುಖ್ಯಮಂತ್ರಿ ಎದುರಿನ ಅಭ್ಯರ್ಥಿ ಬದಲಿಸಿದ ಕಾಂಗ್ರೆಸ್

    ಇನ್ನು ಮಂಗಳವಾರ ಬಿಡುಗಡೆ ಮಾಡಿದ್ದ ಕಾಂಗ್ರೆಸ್​ನ ನಾಲ್ಕನೇ ಪಟ್ಟಿಯಲ್ಲಿ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಎದುರು ಯುಸೂಫ್ ಸವಣೂರ ಅವರನ್ನು ಕಣಕ್ಕಿಳಿಸುವ ಮೂಲಕ ಅಚ್ಚರಿ ಮೂಡಿಸಲಾಗಿತ್ತು.

    yasir khan pathan

    ಇದನ್ನೂ ಓದಿ: ಮಾತೃ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಿ; ವಿವಿಗಳಿಗೆ UGC ಸೂಚನೆ

    ಇನ್ನು ಬುಧವಾರ ಬಿಡುಗಡೆಯಾಗಿರುವ ಐದನೇ ಪಟ್ಟಿಯಲ್ಲಿ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಎದುರಿನ ಅಭ್ಯರ್ಥಿಯನ್ನು ಕಾಂಗ್ರೆಸ್​ ಬದಲಿಸಿದ್ದು ಇದೀಗ ಉದ್ಯಮಿ, ಸವಣೂರಿನ ಯಾಸೀರ್ ಖಾನ್ ಪಠಾಣ್​ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.

    ಅತಿ ಹೆಚ್ಚು ಮತಗಳಿಸಿದವರಿಗೆ ಟಿಕೆಟ್​ ಮಿಸ್​

    ಇನ್ನು 2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಗಳಿಸಿದ್ದ ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿಗೆ ಈ ಬಾರಿಯ ಟಿಕೆಟ್​ ಕೈ ತಪ್ಪಿದೆ.

    ಅಖಂಡ ಶ್ರೀನಿವಾಸ್​ ಮುರ್ತಿ ಬದಲು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದ ಎ.ಸಿ. ಶ್ರೀನಿವಾಸ್​ ಅವರಿಗೆ ಪುಲಕೇಶಿನಗರ ಟಿಕೆಟ್​ ಕೊಡಿಸುವಲ್ಲಿ ಕೆ.ಎಚ್​. ಮುನಿಯಪ್ಪ ಯಶಸ್ವಿಯಾಗಿದ್ಧಾರೆ.

    ಐದನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್​; ಮುಖ್ಯಮಂತ್ರಿ ಎದುರಿನ ಅಭ್ಯರ್ಥಿ ಬದಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts