ಕೊಟ್ಟೂರು: ಕುವೆಂಪು ಸಾಹಿತ್ಯದ ಮೂಲಕ ಮನುಕುಲಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ತಹಶೀಲ್ದಾರ್ ಜಿ.ಕೆ. ಅಮರೇಶ ಹೇಳಿದರು.
ಇದನ್ನೂ ಓದಿ:
ತಹಸೀಲ್ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಶುಕ್ರವಾರ ಮಾತನಾಡಿದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ನೀಡಿರುವ ಕೃತಿಗಳು ಅನರ್ಘರತ್ನಗಳಾಗಿವೆ. ಸಾಹಿತ್ಯ ಮೂಲಕ ನೀಡಿರುವ ಸಂದೇಶಗಳು ಇಂದಿಗೂ ಮುಂದೆಯೂ ಜೀವಂತವಾಗಿರುವಂತವು ಎಂದರು.
ಪ್ರಭಾರೆ ಗ್ರೇಡ್ 2 ತಹಸೀಲ್ದಾರ್ ಎಸ್.ಲೀಲಾ, ಶಿರಸ್ತೇದಾರ ಅನ್ನದಾನೇಶ ಬಿ.ಪತಾರ್ ಇತರರಿದ್ದರು.