More

    ಜಂಗಮ ಜ್ಯೋತಿಗೆ ಅದ್ದೂರಿ ಸ್ವಾಗತ

    ಕೊಟ್ಟೂರು: ಪಟ್ಟಣಕ್ಕೆ ಶುಕ್ರವಾರ ಸಂಜೆ ಆಗಮಿಸಿದ ಜಂಗಮ ಜ್ಯೋತಿ ರಥವನ್ನು ಪಟ್ಟಣದಲ್ಲಿನ ಜಂಗಮ ಸಂಘಟನೆಯ ಯುವಕರು ಬೈಕ್ ರ‌್ಯಾಲಿಯೊಂದಿಗೆ ಸ್ವಾಗತಿಸಿ ಅದ್ದೂರಿ ಮೆರವಣಿಗೆ ಮಾಡಿದರು. ರಥಯಾತ್ರೆಗೆ ಕೊಟ್ಟೂರು ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠದ ಬಳಿ ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹಾರ ಹಾಕುವ ಮೂಲಕ ಸ್ವಾಗತಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಮುದಾಯದ ಜನರು ಮೆರವಣಿಗೆ ಕೈಗೊಂಡರು. ಅಡಿಕೆ ಮಂಜುನಾಥ, ಆಟವಾಳ್ಗಿ ಬೋಜರಾಜ, ಆಟವಾಳ್ಗಿ ಚೆನ್ನಯ್ಯ, ಕೆ.ಅಯ್ಯನಹಳ್ಳಿಯ ಎ.ಎಂ.ಜಿ ಮಲ್ಲಿಕಾರ್ಜುನ, ಬಿ.ಎಂ.ಪಂಚಯ್ಯ, ಕೇದಾರನಾಥ, ಕೆ.ಎಂ.ಸತೀಶ, ಕೊಟ್ರಯ್ಯ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts