ಕುಕನೂರು: ಪಟ್ಟಣದ ಶ್ರೀ ರಾಯರ ಮಠದಲ್ಲಿ ಭಾನುವಾರ ಶ್ರೀರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಭಾನುವಾರ ಸಂಭ್ರಮದಿಂದ ನಡೆಯಿತು. ಧ್ವಜಾರೋಹಣ, ಲಕ್ಷ್ಮೀಪೂಜೆ, ಗೋ ಪೂಜೆ, ಸುಪ್ರಭಾತ, ಪಂಚಾಮೃತಾಭಿಷೇಕ, ಪುಷ್ಪಾಲಂಕಾರ, ಕನಕಾಭಿಷೇಕ, ಪ್ರವಚನ, ಪಲ್ಲಕ್ಕಿ ಸೇವೆ, ಭಜನೆ, ರಥೋತ್ಸವ ಹಾಗೂ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಪ್ರತಿಭಾ ಪುರಸ್ಕಾರ, ಪ್ರಸನ್ನ ಗುಡಿ ತಂಡ ದಾಸವಾಣಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು.