ಕೊಂಡ್ಲಹಳ್ಳಿ: ಇಲ್ಲಿನ ಬಿಳಿನೀರು ಚಿಲುಮೆ ಪುಣ್ಯಕ್ಷೇತ್ರದ ಗುರು ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನದಲ್ಲಿ ಭಾನುವಾರ ವಿಶೇಷ ಪೂಜಾಲಂಕಾರ ಸೇವೆಗಳು ಜರುಗಿದವು.
ರುದ್ರಾಕ್ಷಿ ಅಲಂಕಾರ ಭಕ್ತರ ಮನಸೂರೆಗೊಂಡಿತು. ಲಾಕ್ಡೌನ್ ಸಡಿಲದ ನಂತರ ಸ್ವಾಮಿಯ ಪುಣ್ಯಕ್ಷೇತ್ರದಲ್ಲಿ ಶುಕ್ರವಾರದಿಂದ ತೆರೆದಿದ್ದು, ವಿಶೇಷ ಪೂಜಾಕಾರ್ಯಗಳು ನಡೆಯುತ್ತಿವೆ. ಭಕ್ತರ ಸಂಖ್ಯೆಯೂ ದಿನೇ ದಿನೆ ಹೆಚ್ಚಳವಾಗುತ್ತಿದೆ. ಅರ್ಚಕರಾದ ಮಂಜುನಾಥ್, ಗಿರೀಶ್ ಇತರರು ಉಪಸ್ಥಿತರಿದ್ದರು.