ಕೊಂಡ್ಲಹಳ್ಳಿ: ಸಮೀಪದ ಗೌರಸಮುದ್ರದ ತುಂಬಲುವಿನಲ್ಲಿರುವ ಮಧ್ಯಪ್ರದೇಶದ 10ಕ್ಕೂ ಅಧಿಕ ಕುಟುಂಬಗಳಿಗೆ ಗುರುವಾರ ಆರೋಗ್ಯ ಸಚಿವರು ಕೊಡಮಾಡಿರುವ ಆಹಾರ ಸಾಮಗ್ರಿ, ತರಕಾರಿ ಅಗತ್ಯ ವಸ್ತು ಒಳಗೊಂಡ ಕಿಟ್ ವಿತರಿಸಲಾಯಿತು.
ಸಚಿವರ ಆಪ್ತ ಸಹಾಯಕರಾದ ಪಾಪೇಶ್, ಹನುಮಂತರಾಯಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಜಯಪಾಲಯ್ಯ, ಮಂಡಲ ಅಧ್ಯಕ್ಷ ಇ. ರಾಮರೆಡ್ಡಿ, ಹೊನ್ನೂರು ಗೋವಿಂದಪ್ಪ ಇತರರಿದ್ದರು.