ಕೋಲಾರ: ಮುಂದುವರೆದ ಕೋಲಾರದ ಸಸ್ಪೆನ್ಸ್! ಕುತೂಹಲ ಮೂಡಿಸುತ್ತಿದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಸಂಸದ ಮುನಿಸ್ವಾಮಿ ಭೇಟಿ. ಕೋಲಾರ ಕ್ಷೇತ್ರ ಜೆಡಿಎಸ್ಗೆ ಬಿಟ್ಟು ಕೊಡಬೇಡಿ ಎಂದು ಮನವಿ ಮಾಡಲಾಗಿದೆ.
ಅವಿಭಜಿತ ಕೋಲಾರ ಕ್ಷೇತ್ರದಲ್ಲಿ ಎಲ್ಲಾ ಜೆಡಿಎಸ್ ಶಾಸಕರು ಇದ್ದರೂ ಎಂಪಿ ಸ್ಥಾನ ಗೆಲ್ಲಲು ಅವರಿಗೆ ಸಾಧ್ಯವಾಗಿಲ್ಲ. ಬಿಜೆಪಿ ಪಕ್ಷ ಗೆಲ್ಲಲು ಈ ಬಾರಿ ಹೆಚ್ವು ಅವಕಾಶಗಳು ಇವೆ. ಅಲ್ಲದೇ ಎಸ್ಸಿ ಬಲ ಸಮುದಾಯದಿಂದ ದಕ್ಷಿಣ ಭಾರತದಲ್ಲಿ ಇರುವುದು ತಾವೊಬ್ಬರೇ, ಹಾಗಾಗಿ ಕ್ಷೇತ್ರ ಬಿಜೆಪಿ ಉಳಿಸಿಕೊಳ್ಳಬೇಕು ಎಂದು ನಡ್ಡಾರಿಗೆ ಮನವಿ ಮಾಡಿದ್ದಾರೆ.
ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆದಿದ್ದು, ಕಳೆದ 4 ದಿನಗಳಿಂದ ದೆಹಲಿಯಲ್ಲೇ ಮುನಿಸ್ವಾಮಿ ಬಿಡು ಬಿಟ್ಟಿದ್ದಾರೆ. ಈ ಸುದೀರ್ಘ ಮಾತುಕತೆ ಯಾವ ನಿರ್ಧಾರಕ್ಕೆ ಎಡಮಾಡಿಕೊಡಲಿದೆ ಎಂಬುದೇ ಕಾತರ.
ಶ್ರೀಲೀಲಾ ಜತೆ ನಟಿಸಲು ಸ್ಟಾರ್ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’ ಬೆಡಗಿಗೆ ಸಂಕಷ್ಟ