More

    ಬೇಕರಿ ಉದ್ಯಮಿಗಳ ಅಸಹಾಯಕ ಪರಿಸ್ಥಿತಿ

    ಮಾಲಂಬಿ ದಿನೇಶ್ ಶನಿವಾರಸಂತೆ

    ಬೇಕರಿ ಉದ್ಯಮಿ ನಷ್ಟದಲ್ಲಿರುವುದರಿಂದ ಅನಿವಾರ್ಯವಾಗಿ ಅನ್ಯ ಕೆಲಸಗತ್ತ ಹೋಗುವಂತಾಗಿದೆ ಎಂದು ಬೇಕರಿ ಉದ್ಯಮಿಗಳು ಅಸಹಾಯಕತೆ ವ್ಯಕ್ತ ಪಡಿಸಿದರು. ಶನಿವಾರಸಂತೆ ಪತ್ರಿಕಾ ಭವನದಲ್ಲಿ ಶುಕ್ರವಾರ ಬೇಕರಿ ಉದ್ಯಮಿಗಳೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ತಮ್ಮ ಸಮಸ್ಯೆ ಬಿಚ್ಚಿಟ್ಟರು.

    ಸರ್ಕಾರ ಮತ್ತು ಸಂಬಂಧ ಪಟ್ಟ ಇಲಾಖೆಯಿಂದ ಸೇವೆ ಸವಲತ್ತುಗಳಿದ್ದರೂ ಅವುಗಳಿಂದ ವಂಚಿತರಾಗಿರುವ ಬೇಕರಿ ಉದ್ಯಮಿ ಗಳು ಅತಂತ್ರ ಪರಿಸ್ಥಿತಿಗೆ ಬಂದಿದ್ದು, ಬದುಕು ಸಹ ಮೂರಾಬಟ್ಟೆಯಾಗಿದೆ. ಕಳೆದ ೨ವರ್ಷದ ಹಿಂದೆ ಬಂದ ಕರೊನಾ ಸಂಕಷ್ಟದಿಂದ ಪಾರಾಗಲು ಬೇಕರಿ ಉದ್ಯಮಿಗಳು ಹರಸಾಹಸ ಪಡುವಂತಾಗಿದೆ. ದಿನ ಬಳಕೆ ಪದಾರ್ಥಗಳ ಬೆಲೆಯಲ್ಲಿ ಬಾರಿ ಏರಿಕೆಂಗಿದ್ದರೂ ಗ್ರಾಹಕರಿಂದ ಅದನ್ನು ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಅನಿವಾರ್ಯವಾಗಿ ಬೇಕರಿ ನಡೆಸಿಕೊಂಡು ಹೋಗಬೇಕಾಗಿದೆ.

    ಈ ಉದ್ಯಮದಿಂದ ಲಾಭ ಇದ್ದರು ಸಹ ಇತ್ತೀಚೆಗೆ ಆರ್ಥಿಕ ಸ್ಥಿತಿ ಜನರಲ್ಲಿ ಸರಿ ಇಲ್ಲದೆ ಇರುವುದರಿಂದ ಬೇಕರಿಗಳಿಗೆ ಜನರು ಬರುತಿಲ್ಲ. ಈ ಉದ್ಯಮವೊಂದನ್ನೆ ನಂಬಿಕೊಂಡರೆ ಬದುಕು ಬೀದಿಗೆ ಬರುವುದೆಂದು ಈ ಉದ್ಯಮದೊಂದಿಗೆ ದಿನಸಿ ಅಂಗಡಿ ಸೇರಿ ದಂತೆ ತರಕಾರಿ ವ್ಯಾಪಾರ ಇನ್ನಿತರ ವ್ಯಾಪಾರಗಳನ್ನು ಮಾಡುವಂತಾಗಿದೆ.

    ಕರೊನ ಲಾಕ್ ಡೌನ್ ಆಗುವುದಕ್ಕೆ ಮುನ್ನ ಒಂದೊಂದು ಬೇಕರಿಯಲ್ಲಿ ಸರಿ ಸುಮಾರು ೪ರಿಂದ ೫ ಜನರನ್ನು ಕೆಲಸಕ್ಕೆ ನೇಮಿಸಿ ಕೊಳ್ಳುತ್ತಿದ್ದರು. ಆದರೆ, ಇತ್ತಿಚೆಗೆ ಕೆಲಸಕ್ಕೆ ಯಾರನ್ನು ನೇಮಿಸಿಕೊಳ್ಳುತ್ತಿಲ್ಲ. ಮನೆಯವರೆ ಬೇಕರಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಕಾರ್ಮಿಕರನ್ನು ನೇಮಿಸಿಕೊಂಡರೆ ಅವರು ಕೇಳುವಷ್ಟು ವೇತನ ನೀಡಲು ಬೇಕರಿ ಉದ್ಯಮಿಗಳಿಗೆ ಸಾಧ್ಯವಾಗುತಿಲ್ಲ, ಬೇಕರಿಯಲ್ಲಿ ನೀಡುವ ವೇತನ ಎಲ್ಲಿಗೂ ಸಾಧ್ಯವಾಗುವುದಿಲ್ಲ ಎಂದು ಕಾರ್ಮಿಕರು ಟಿಂಬರ್, ಗಾರೆ, ಪೈಂಟ್, ತೋಟ ಕೆಲಸಕ್ಕೆ ತೆರಳುತಿದ್ದಾರೆ.

    ಬೇಕರಿ ಉದ್ಯಮ ಆದಾಯ ತರುವ ಉದ್ಯಮವಾಗಿತ್ತು. ಆದರೆ, ಅನೇಕ ವರ್ಷಗಳಿಂದ ಇದನ್ನೆ ಮಾಡಿಕೊಂಡು ಬರುತಿದ್ದ ಅನೇಕರು ಇದೀಗ ಬಿಡಲು ಸಾಧ್ಯವಾಗದೆ, ಮುಂದುವರಿಯಲು ಆಗದ ಅಸಹಾಯಕ ಪರಿಸ್ಥಿತಿ ಎದುರಿಸುವಂತಾಗಿದೆ.

    ಹೆಚ್ಚು ದರ ನಿಗದಿ ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಹಕರು ಕಡಿಮೆ ದರದಲ್ಲಿ ಎಲ್ಲಿ ಉತ್ಪನ್ನ ಸಿಗುತ್ತದೊ ಅಲ್ಲಿಗೆ ತೆರಳುತ್ತಾರೆ. ಗುಣಮಟ್ಟ ಗಮನಿಸುತ್ತಿಲ್ಲ. ಗುಣಮಟ್ಟದಲ್ಲಿ ನಾವು ಪದಾರ್ಥ ಮಾಡಲು ಹೋದರೆ ಕಡಿಮೆ ದರದಲ್ಲಿ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತ ಪಡಿಸಿದರು.

    **
    ಅನೇಕ ವರ್ಷಗಳಿಂದ ಇದೆ ಉದ್ಯಮ ಮಾಡಿಕೊಂಡು ಬರುತ್ತಿದ್ದೇನೆ. ನಮ್ಮ ಕೆಲಸಕ್ಕೆ ಕಾರ್ಮಿಕರು ಬರುತ್ತಿಲ್ಲ. ಹೆಚ್ಚು ವೇತನ ಕೇಳುತ್ತಾರೆ. ಬೇರೆ ಕೆಲಸಗಳಲ್ಲಿ ಹೆಚ್ಚು ವೇತನ ಸಿಗುವುದರಿಂದ ಬೇರೆ ಕೆಲಸಗಳತ್ತ ಮುಖ ಮಾಡಿದ್ದಾರೆ. ಒಂದಿಬ್ಬರನ್ನು ಕೆಲಸಕ್ಕೆ ನೇಮಿಸಿಕೊಂಡು ನಾವೆ ಮನೆಯವರೆ ನಿರ್ವಹಣೆ ಮಾಡಿಕೊಂಡು ಹೋಗುತಿದ್ದೇವೆ. ನಟೇಶ್, ವಿರಭದ್ರೇಶ್ವರ ಬೇಕರಿ, ಶನಿವಾರಸಂತೆ.

    **
    ಬೇಕರಿ ಉದ್ಯಮ ಲಾಭದಾಯಕ ಉದ್ಯಮ. ಆದರೆ, ಕರೊನಾ ಸಂಕಷ್ಟದಲ್ಲಿ ನಾವು ಬೇರೆ ಕೆಲಸಗಳತ್ತ ಮುಖ ಮಾಡಬೇಕಾಯಿತು. ತರಕಾರಿ ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡಬೇಕಾಯಿತು. ಇಂದಿಗೂ ನಾವು ಕೆಲಸಕ್ಕೆ ಕಾರ್ಮಿಕರನ್ನು ನೇಮಿಸಿಕೊಳ್ಳದೆ. ನಾವೆ ಮನೆಯವರು ನಿರ್ವಹಣೆ ಮಾಡಿಕೊಂಡು ಹೋಗುತಿದ್ದೇವೆ. ಮಣಿ, ಬೇಕರಿ ಉದ್ಯಮಿ.
    **
    ಬೇಕರಿ ಒಂದನ್ನೆ ನಂಬಿಕೊಂಡರೆ ಮನೆ ನಿರ್ವಹಣೆ ಕಷ್ಟವಾಗುತ್ತದೆ. ಅದರೊಂದಿಗೆ ದಿನಸಿ ಅಂಗಡಿಯನ್ನು ಇಟ್ಟುಕೊಂಡಿದ್ದೇನೆ. ಹಾಲಿನ ಏಜೆನ್ಸಿ ತೆಗೆದುಕೊಂಡಿದ್ದೇನೆ. ಇದರಿಂದ ಜೀವನ ನಿರ್ವಹಣೆ ಹಾಗೂ ಬೇಕರಿಯನ್ನು ನಿರ್ವಹಣೆಗೆ ಕಷ್ಟವಾಗುತಿಲ್ಲ. ಒಂದನ್ನೆ ನಂಬಿಕೊಂಡಿದ್ದರೆ ಕಷ್ಟವಾಗುತ್ತದೆ. ಧರ್ಮಣ್ಣ, ಗುಡುಗಳಲೆ, ಬೇಕರಿ ಉದ್ಯಮಿ.

    ಬೇಕರಿ ಉದ್ಯಮದಿಂದ ಹೆಚ್ಚು ಆದಾಯ ಗಳಿಸಲು ಸಾಧ್ಯವಾಗುತಿಲ್ಲ. ಕಾರಣ ಇತ್ತೀಚೆಗೆ ನಾವು ಬೇಕರಿಗಳಲ್ಲಿ ಬಳಕೆ ಮಾಡುವ ಪದಾರ್ಥಗಳಿಗೆ ಬಳಕೆ ಮಾಡುವ ವಸ್ತುಗಳಿಗೆ ಬೆಲೆ ಹೆಚ್ಚಾಗಿದೆ. ಆದರು ಸಹ ನಾವು ಗುಣಮಟ್ಟದ ಪದಾರ್ಥ ತಯಾರು ಮಾಡಿ ಗ್ರಾಹಕರಿಗೆ ನೀಡುತ್ತಿದ್ದೇವೆ. ಇದರೊಂದಿಗೆ ಜೆಸಿಬಿ ಇಟ್ಟುಕೊಂಡಿದ್ದೇನೆ. ಇದರಲ್ಲಿ ದುಡಿದು ಬೇಕರಿಗೆ ವಿನಿಯೋಗಿಸುತ್ತಿದ್ದೇನೆ. ಪುನೀತ್, ಬನಶಂಕರಿ ಬೇಕರಿ, ಶನಿವಾರಸಂತೆ.
    **
    ಬೇಕರಿ ಉದ್ಯಮದಿಂದ ಉತ್ತಮ ಆದಾಯ ಗಳಿಸಬಹುದಿತ್ತು. ಆದರೆ, ಕರೊನಾ ಲಾಕ್ ಡೌನ್‌ನಿಂದಾಗಿ ನಾವು ಸಂಕಷ್ಟ ಎದುರಿಸು ವಂತಾಗಿತ್ತು, ಬೆಲೆ ಏರಿಕೆ ಹೆಚ್ಚಾದರೂ ನಾವು ಬೆಲೆ ಹೆಚ್ಚು ಮಾಡಲು ಸಾಧ್ಯವಾಗದ ಪರಿಸ್ಥಿತಿ ನಮ್ಮದು. ಸರ್ಕಾರದಿಂದ ನಮಗೂ ಸಹ ಪ್ರೋತ್ಸಾಹ ನೀಡಲಿ. ವಿಶ್ವನಾಥ್, ವಿಲಾಶ್ ಬೇಕರಿ, ಶನಿವಾರಸಂತೆ.

    **
    ಪಟ್ಟಣಕ್ಕೆ ಬರುವವರು ತಿಂಡಿ ತಿನಿಸುಗಳಿಗೆ ಹೆಚ್ಚು ಹಣ ವಿನಿಯೋಗಿಸುತಿಲ್ಲ. ನಮ್ಮಲ್ಲಿಗೆ ಶಾಲಾ- ಕಾಲೇಜು ಮಕ್ಕಳು ಹೆಚ್ಚಾಗಿ ಬರುತ್ತಿದ್ದರು. ತಿನಿಸು ಪದಾರ್ಥಗಳಿಗೆ ನಿಗದಿ ಪಡಿಸಿದಷ್ಟು ಹಣ ನೀಡುತ್ತಿದ್ದರು. ಆದರೆ, ಇತ್ತೀಚೆಗೆ ಕಡಿಮೆ ಹಣದಲ್ಲಿ ಗುಣಮಟ್ಟದ ತಿನಿಸು ಕೇಳುತ್ತಾರೆ. ಇದರಿಂದ ನಮಗೆ ಹೆಚ್ಚಾಗಿ ಆದಾಯ ಗಳಿಸಲು ಸಾಧ್ಯವಾಗುತಿಲ್ಲ. ಆದರೆ, ಜೀವನ ನಿರ್ವಹಣೆಗೆ ಕಷ್ಟವಾಗುತ್ತಿಲ್ಲ. ಉದಯ್, ಕಾವೇರಿ ಬೇಕರಿ ಶನಿವಾರಸಂತೆ.

    **
    ನಮಗೆ ಆದಾಯ ಕಡಿಮೆ ನಾವು ವಿತರಿಸಿಕೊಳ್ಳುವ ಕಂಪೆನಿಗಳ ತಿನಿಸು ಪತಾರ್ಥಗಳಿಗೆ ನಮ್ಮ ಹಣ ನೀಡಬೇಕಾಗಿದೆ. ಮಾರಾಟ ಗಾರರಿಗೆ ಪೈಸೆ ಲೆಕ್ಕದಲ್ಲಿ ಹಣ ಉಳಿಯುತ್ತಿದೆ. ನಾವು ಮನೆಯವರೆಲ್ಲ ಇದೆ ಉದ್ಯಮ ನಂಬಿಕೊಂಡು ಕೆಲಸ ನಿರ್ವಹಿಸುತ್ತಿದ್ದೇವೆ. ಮುಂದೆ ಉತ್ತಮ ಆದಾಯ ಗಳಿಸಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ಮೊದಲು ಮೂರ‌್ನಾಲ್ಕು ಜನ ಕೆಲಸಕ್ಕೆ ಸೇರಿಸಿಕೊಂಡಿದ್ದೇವು. ಆದರೆ ಇದೀಗ ಒಬ್ಬರನ್ನು ಮಾತ್ರ ಕೆಲಸಕ್ಕೆ ನೇಮಿಸಿಕೊಂಡಿದ್ದೇನೆ. ರಘು, ಸೂರ್ಯ ಬೇಕರಿ, ಗುಡುಗಳಲೆ. (ಚಿತ್ರ: ರಘು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts