ಕಲಬುರಗಿ: ಡಿಪೋ ಮ್ಯಾನೇಜರ್ ತನಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಾಲಕ ಕಂ ನಿರ್ವಾಹಕರೊಬ್ಬರು ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿ ಡಿಪೋ-2ರಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದವರನ್ನು ಕಲಬುರಗಿ ಜಿಲ್ಲೆ ಅಫ್ಜಲ್ಪುರ ತಾಲ್ಲೂಕಿನ ಇಂಗಳಗಿ ಗ್ರಾಮದ ನಿವಾಸಿ ಬೀರಣ್ಣ ಎಂದು ಗುರತಿಸಲಾಗಿದ್ದು, ಇವರು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ.
ಕಲಬುರಗಿಯಿಂದ ಅಫ್ಜಲ್ಪುರಕ್ಕೆ ಪ್ರತಿನಿತ್ಯ 8 ಸಿಂಗಲ್ ಟ್ರಿಪ್ ಹೋಗಿ ಬರುವಂತೆ ಸೂಚಿಸಲಾಗುತ್ತಿತ್ತು. ಒಂದು ವೇಳೆ ಗುರಿ ತಲುಪದಿದ್ದಲ್ಲಿ ಮಾರನೇ ದಿನ ಡ್ಯೂಟಿ ಕೊಡದೆ ಡಿಪೋ ಮ್ಯಾನೇಜರ್ ಮಂಜುನಾಥ್ ಸತ್ತಾಯಿಸುತ್ತಿದ್ದರು. ಇದರಿಂದ ಮನನೊಂದಿದ್ದ ಬೀರಣ್ಣ ಬಸ್ ಡಿಪೋದಲ್ಲಿ ಡೀಸೆಲ್ ಸುರಿದಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ದಿನಾಂಕ ಫಿಕ್ಸ್; ಪ್ರಿಯಾಂಕ ಗಾಂಧಿ ಚಾಲನೆ
ಎಲ್ಲರಿಗೂ ತೊಂದರೆಯಾಗಿದೆ
ಈ ಕುರಿತು ಪ್ರತಿಕ್ರಿಯಿಸಿರುವ ಕೆಕೆಆರ್ಟಿಸಿಡಿಸಿ ಸಿದ್ದಪ್ಪ ಗಂಗಾಧರ್ ಶಕ್ತಿ ಯೋಜನೆ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಡ್ರೈವರ್ಗಳಿಗೆ ಹೆಚ್ಚುವರಿ ಶೆಡ್ಯೂಲ್ ಹಾಕಲಾಗಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಹಿನ್ನಲೆ ಹೆಚ್ಚುವರಿ ಟ್ರಿಪ್ ಮಾಡಲು ಸೂಚಿಸಲಾಗಿದೆ.
ಇದರಿಂದಾಗಿ ಡ್ರೈವರ್ ಬೀರಣ್ಣ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಹಿಂದೆ ಸಾಮಾನ್ಯವಾಗಿ ಆರು ಟ್ರಿಪ್ ಇತ್ತು ಈಗ 8 ಟ್ರಿಪ್ ಮಾಡಲಾಗಿದೆ. ಇದಿರಿಂದಾಗಿ ಎಲ್ಲರಿಗೂ ತೊಂದರೆಯಾಗಿದೆ. ಹಿಂದಿನ ಡಡಿಪೋ ವರದಿ ತೆಗೆದು ನೋಡಿದಾಗ ನಮ್ಮ ಬಗ್ಗೆ ಒಳ್ಳೆಯ ರೆಕಾರ್ಡ್ ಇದೆ. ಹೊಸ ಬಸ್ ಹಾಗೂ ಸಿಬ್ಬಂದಿಗಳು ಬರಲಿದ್ದಾರೆ ಆಗ ಈ ಟ್ರಿಪ್ ಲೋಡ್ ಕಡಿಮೆಯಾಗುತ್ತೆ ಎಂದು ಕೆಕೆಆರ್ಟಿಸಿ ಡಿಸಿ ಸಿದ್ದಪ್ಪ ಗಂಗಾಧರ್ ತಿಳಿಸಿದ್ದಾರೆ.