More

    ಗ್ಯಾರಂಟಿಗಾಗಿ ಕಾಂಗ್ರೆಸ್‌ಗೆ ಮತ ನೀಡಿ

    ಕಿಕ್ಕೇರಿ : ನುಡಿದಂತೆ ನಡೆದ ಪಕ್ಷಕ್ಕೆ ಮತ ನೀಡಬೇಕು ಎಂದು ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಮನವಿ ಮಾಡಿದರು.ಸಮೀಪದ ಚೌಡೇನಹಳ್ಳಿ, ಕೃಷ್ಣಾಪುರ, ಕಿಕ್ಕೇರಿ ಮತ್ತಿತರ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಅವರು ಮತಯಾಚಿಸಿ ಮಾತನಾಡಿದರು.
    ರಾಜ್ಯದ ಜನತೆಯ ಭಾಗ್ಯಗಳನ್ನು ಕಾಂಗ್ರೆಸ್ ಸರ್ಕಾರ ಭರಿಸಿದೆ. ಕುಟುಂಬಗಳು ನೆಮ್ಮದಿಯಿಂದ ಇರುವಂತಾಗಿದೆ. ತಾನು ರೈತನ ಮಗನಾಗಿದ್ದು ರೈತ, ಬಡವರ ಸಂಕಷ್ಟ ಗೊತ್ತಿದೆ. ದೇವರು ಸಾಕಷ್ಟು ಹಣಕೊಟ್ಟಿದ್ದು, ಒಮ್ಮೆ ಸೇವೆಗೆ ಅವಕಾಶ ಮಾಡಿಕೊಡಿ ಎಂದರು.
    ಸಹಿಸಲಾಗುತ್ತಿಲ್ಲ: ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಮಾತನಾಡಿ, ನಮ್ಮ ಸರ್ಕಾರದಿಂದ ಪ್ರತಿ ತಿಂಗಳಿಗೆ ಪ್ರತಗಿ ಮನೆಗೆ ಕನಿಷ್ಠ (ವಿವಿಧ ಭಾಗ್ಯಗಳಿಂದ) 9 ಸಾವಿರ ರೂ. ಹಣ ಸೇರುತ್ತಿದೆ. ಇದು ಸೌಭಾಗ್ಯವಲ್ಲವೇ ಎಂದರು. ಪಂಚಭಾಗ್ಯಗಳಿಂದ ರಾಜ್ಯದ ಜನತೆ ಸಂತಸದಿಂದ ಇರುವುದು ವಿರೋಧ ಪಕ್ಷದವರಿಗೆ ಸಹಿಸಲಾಗುತ್ತಿಲ್ಲ ಎಂದು ಕಿಡಿಕಾರಿದರು.
    ಸುಳ್ಳಿನ ಮೋದಿ: ಪ್ರಧಾನಿ ಮೋದಿಗೆ ಗೊತ್ತಿರುವುದು ಬರೀ ಸುಳ್ಳಿನ ಮಾತು. ಬಿಜೆಪಿಯಿಂದ ದೇಶದ ಪ್ರಗತಿಯಾಗಲಾರದು. ಸ್ಥಿರ ಸರ್ಕಾರ ನೀಡಲು ಕಾಂಗ್ರೆಸ್‌ಗೆ ಸಹಕರಿಸಿ. ಜನರ ಸಮಸ್ಯೆಗನ್ನು ಪರಿಹರಿಸಲು, ಮಹಿಳೆಯರ ಸಂತೃಪ್ತ ಜೀವನಕ್ಕೆ ಬೆಂಬಲಿಸಲು ಕೈ ಗುರುತಿಗೆ ಮತ ನೀಡಿ ಎಂದು ವಿನಂತಿಸಿಕೊಂಡರು. ಮಾಜಿ ಶಾಸಕ ಬಿ. ಪ್ರಕಾಶ್, ಕೆಪಿಸಿಸಿ ಸದಸ್ಯ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ನಾಗೇಂದ್ರಕುಮಾರ್, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ. ಗಂಗಾಧರ್, ಮುಖಂಡರಾದ ಬಿ.ಎಲ್. ದೇವರಾಜು, ಕೋಡಿಮಾರನಹಳ್ಳಿ ದೇವರಾಜು, ಎಂ.ಡಿ. ಕೃಷ್ಣಮೂರ್ತಿ, ರಾಮಕೃಷ್ಣೇಗೌಡ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts