More

    ಜಿಲ್ಲಾ ಹೋರಾಟ ಸಮಿತಿಯಲ್ಲಿ ಎಲ್ಲರಿಗೂ ಪ್ರಾಶಸ್ತ್ಯ

    ಗಂಗಾವತಿ: ಕಿಷ್ಕಿಂದಾ ಜಿಲ್ಲೆ ಹೋರಾಟಕ್ಕಾಗಿ ತಾತ್ಕಾಲಿಕ ಸಂಚಾಲಕ ಸಮಿತಿ ಅಸ್ತಿತ್ವಕ್ಕೆ ತರಲಾಗುತ್ತಿದ್ದು, ಪಕ್ಷಾತೀತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ಪ್ರತಿನಿಧಿ ಹಾಗೂ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಹೇಳಿದರು.

    ಜಿಲ್ಲಾ ರಚನೆ ಬೇಡಿಕೆ ದೀರ್ಘಾವಧಿ ಹೋರಾಟ

    ನಗರದ ಕಸಾಪ ಭವನದ ಆವರಣದಲ್ಲಿ ಕಿಷ್ಕಿಂದಾ ಜಿಲ್ಲೆ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಭಾನುವಾರ ಮಾತನಾಡಿದರು. ಜಿಲ್ಲಾ ರಚನೆ ಬೇಡಿಕೆ ದೀರ್ಘಾವಧಿ ಹೋರಾಟವಾಗಲಿದೆ. ಎಲ್ಲ ರೀತಿಯಿಂದಲೂ ನೆರವು ನೀಡುವ ಪ್ರಮುಖರನ್ನೊಳಗೊಂಡ ಸಮಿತಿ ರಚಿಸಲಾಗುವುದು. ಸಂಚಾಲಕ ಸಮಿತಿಗಾಗಿ ಸದಸ್ಯರಿಂದಲೇ ಅಭಿಪ್ರಾಯ ಪಡೆದುಕೊಳ್ಳಲಾಗುತ್ತಿದ್ದು, ಒಮ್ಮತಕ್ಕೆ ಆದ್ಯತೆ ನೀಡಲಾಗುವುದು ಎಂದರು.

    ಇದನ್ನೂ ಓದಿ: ದೂದ್​ಸಾಗರ್ ನೋಡಲೆಂದು ಹೋದ ಯುವಕರನ್ನು ಪೊಲೀಸರು ಬಸ್ಕಿ ಹೊಡೆಸಿ ವಾಪಸ್ ಕಳಿಸಿದ್ರು!

    ನಗರಸಭೆ ಸದಸ್ಯ ಶರಭೋಜಿ ಗಾಯಕ್ವಾಡ್, ಕಸಾಪ ತಾಲೂಕಾಧ್ಯಕ್ಷ ಶ್ರೀನಿವಾಸ ಅಂಗಡಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಸಂತೋಷ ಕೆಲೋಜಿ, ಸಂಗಮೇಶ ಸುಗ್ರೀವಾ, ಪವನಕುಮಾರ ಗುಂಡೂರು, ಮಂಜುನಾಥ ಕಟ್ಟಿಮನಿ, ಲಿಂಗನಗೌಡ ಹೇರೂರು, ಪ್ರಲ್ಹಾದ ಜೋಶಿ, ಚನ್ನಬಸವ ಜೇಕಿನ್, ಪಂಪಣ್ಣನಾಯಕ, ವಿರೂಪಾಕ್ಷಗೌಡ ನಾಯಕ, ವಿಠ್ಠಲನಾವಟೆ, ಎಂ.ಜೆ.ಶ್ರೀನಿವಾಸ, ನಾಗರಾಜ್ ಗುತ್ತೇದಾರ್, ಸರ್ವೇಶ ವಸದ್, ಜಗನ್ನಾಥ ಆಲ್ಲಂಪಲ್ಲಿ, ಶಾಹೀನ್ ಕೌಸರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts