More

    ನಟ ರಕ್ಷಿತ್​ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರೆಂಟ್​ ಜಾರಿ

    ಬೆಂಗಳೂರು: ಕಿರಿಕ್​ ಪಾರ್ಟಿ ಚಿತ್ರದಲ್ಲಿ ಅನುಮತಿ ಇಲ್ಲದೇ ಹಾಡು ಬಳಸಿದ ಆರೋಪದ ಮೇಲೆ ನಟ ರಕ್ಷಿತ್​ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ವಿರುದ್ಧ ಮಂಗಳವಾರ ಜಾಮೀನು ರಹಿತ ವಾರೆಂಟ್​ ಜಾರಿಯಾಗಿದೆ.

    ಕ್ರೇಜಿಸ್ಟಾರ್​ ರವಿಚಂದ್ರನ್​ ಅಭಿನಯದ ಶಾಂತಿಕ್ರಾಂತಿ ಚಿತ್ರದ ಮಧ್ಯರಾತ್ರೀಲಿ ಎಂಬ ಹಾಡನ್ನು ಕಿರಿಕ್​ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ಎಂದು ಲಹರಿ ಮ್ಯೂಸಿಕ್​ ಸಂಸ್ಥೆ ಕಿರಿಕ್​ ಪಾರ್ಟಿ ಚಿತ್ರತಂಡದ ವಿರುದ್ಧ ದೂರು ದಾಖಲಿಸಿತ್ತು.

    ಕೃತಿಚೌರ್ಯ ಕಾಯ್ದೆಯಡಿ ರಕ್ಷಿತ್ ಶೆಟ್ಟಿ ವಿರುದ್ಧ ಲಹರಿ ಸಂಸ್ಥೆ ಜನವರಿ 11, 2017ರಂದು ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ 9ನೇ ಎಸಿಎಂಎಂ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಈ ವಿಚಾರ ದೊಡ್ಡ ವಿವಾದವನ್ನು ಸೃಷ್ಟಿ ಮಾಡಿತ್ತು.

    ಹಾಡನ್ನು ಕದ್ದಿದ್ದಾರೆ ಎಂದು ಲಹರಿ ಸಂಸ್ಥೆ ದೂರಿದರೆ, ಇಲ್ಲ ಆ ಹಾಡಿನ ಸ್ಪೂರ್ತಿಯಾಗಿಟ್ಟುಕೊಂಡು ಬೇರೆ ರೀತಿಯಲ್ಲೇ ಸೃಷ್ಟಿಸಲಾಗಿದೆ ಎಂದು ಚಿತ್ರತಂಡ ವಾದಿಸಿತ್ತು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts