More

    ಕೆರೂರದಲ್ಲಿ ಸೋಂಕಿತ ಸ್ಥಳದಲ್ಲೇ ಸಂತೆ

    ಕೆರೂರ: ಜಿಲ್ಲಾಡಳಿತ ವಾರದ ಸಂತೆ ನಿಷೇಧಿಸಿದ್ದರೂ ಪಟ್ಟಣದ ಕರೊನಾ ಹಾಟ್‌ಸ್ಪಾಟ್ ಸ್ಥಳದಲ್ಲಿ ಮಂಗಳವಾರ ತರಕಾರಿ ಸಂತೆ ಭರ್ಜರಿಯಾಗಿ ನಡೆದು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಯಿತು. ಇಲ್ಲಿಯ ಹೊಸಪೇಟೆ ಗಲ್ಲಿಯ ಪತ್ತಾರ ಕಟ್ಟೆಯ ಅಕ್ಕಪಕ್ಕದಲ್ಲಿನ ಮನೆಗಳಲ್ಲಿ ಕರೊನಾ ಸೋಂಕಿತರು ಇದ್ದಾರೆ. ಅಲ್ಲಿಯೇ ಸಂತೆ ನಡೆದ ಪರಿಣಾಮ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತೊಂದು ಎಡವಟ್ಟು ಮಾಡಿ ನಾಗರಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

    ಸಂತೆಯಲ್ಲಿ ಜನರು ಕರೊನಾ ನಿಯಮಗಳನ್ನು ಪಾಲಿಸದೆ ಮಾಸ್ಕ್ ಧರಿಸದೆ ತರಕಾರಿ ಖರೀದಿಗೆ ಮುಗಿ ಬಿದ್ದಿರುವುದು ಕಂಡು ಬಂದಿತು. ಸೋಂಕು ಮತ್ತಷ್ಟು ಹರಡುವಿಕೆಗೆ ಅವಕಾಶ ನೀಡುವ ಘಟನೆಗಳು ನಗರದಲ್ಲಿ ಮೇಲಿಂದ ಮೇಲೆ ನಡೆಯುತ್ತಿವೆ. ಸೋಂಕಿತ ವ್ಯಕ್ತಿಗಳ ಮನೆ ಅಕ್ಕಪಕ್ಕದಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಿಲ್ಲ ಎಂದು ಜನತೆ ದೂರಿದ್ದಾರೆ.

    ಪತ್ತಾರಕಟ್ಟೆ ಹತ್ತಿರದ ಸೋಂಕಿತ ಸ್ಥಳದಲ್ಲಿ ಮಂಗಳವಾರ ಸಂತೆ ನಡೆದ ಬಗ್ಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿದ್ದರು. ಕೂಡಲೇ ಪಪಂ ಮುಖ್ಯಾಧಿಕಾರಿ ಸಂಪರ್ಕಿಸಿ ಸಂತೆ ಬಂದ್ ಮಾಡಿಸಲಾಗಿದೆ. ಇನ್ನೂ ಮುಂದೆ ಈ ರೀತಿಯಾಗದಂತೆ ಎಚ್ಚರಿಕೆ ವಹಿಸಲಾಗುವುದು.
    ಮಂಜುಳಾ ತಿಮ್ಮಾಪುರ ಕೆರೂರ ಪಪಂ ಅಧ್ಯಕ್ಷೆ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts