More

    ಲಾಕ್​ಡೌನ್​ನಿಂದಾಗಿ ಆಲ್ಕೋಹಾಲ್​ ಸಿಗದಿದ್ದಕ್ಕೆ ದಿನಗೂಲಿ ನೌಕರ ತೆಗೆದುಕೊಂಡ ನಿರ್ಧಾರ ಸರೀನಾ?

    ತ್ರಿಶ್ಶೂರ್​: ಕರೊನಾ ವೈರಸ್​ ತಡೆಗಟ್ಟಲು ಕರೆ ನೀಡಿರುವ ಲಾಕ್​ಡೌನ್​ನಿಂದಾಗಿ ಆಲ್ಕೋಹಾಲ್​ ಸಿಗುತ್ತಿಲ್ಲ ಎಂಬ ಹತಾಶೆಯಿಂದ ಕೇರಳದ 38 ವರ್ಷದ ದಿನಗೂಲಿ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.

    ವೃತ್ತಿಯಲ್ಲಿ ಪೇಂಟರ್​ ಆಗಿರುವ ಸನೋಜ್​ ತಮ್ಮ ನಿವಾಸದ ಎದುರಿನ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಎಲ್ಲಿಯೂ ಆಲ್ಕೋಹಾಲ್​ ದೊರೆಯದಿದ್ದಕ್ಕೆ ಸನೋಜ್​ ತುಂಬಾ ಹತಾಶನಾಗಿದ್ದ ಎಂದು ಕುಟುಂಬದವರು ತಿಳಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ವಾಭವಿಕವಲ್ಲದ ಮರಣ ಪ್ರಕರಣ ದಾಖಲಾಗಿದ್ದು, ಮತ್ತಷ್ಟು ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

    ಲಾಕ್​ಡೌನ್​ ಆದೇಶ ಹೊರಬಿದ್ದಾಗಿನಿಂದ ಕೇರಳದಲ್ಲಿ ಖಾಸಗಿ ಮತ್ತು ಸರ್ಕಾರಿ ವೈನ್​ ಸ್ಟೋರ್​ಗಳು ಸಂಪೂರ್ಣ ಬಂದ್​ ಆಗಿವೆ. ಈವರೆಗೂ ಕೇರಳದಲ್ಲಿ 120ಕ್ಕೂ ಹೆಚ್ಚು ಮಂದಿಗೆ ಕರೊನಾ ವೈರಸ್​ ಸೋಂಕು ತಗುಲಿದೆ. (ಏಜೆನ್ಸೀಸ್​)

    ಐಪಿಎಲ್​ ದಾಖಲೆ ಹಿಂದಿಕ್ಕಿದ ಪ್ರಧಾನಿ ಮೋದಿಯ ಲಾಕ್​ಡೌನ್​ ಘೋಷಣೆ: ಟಿವಿ ಲೋಕದಲ್ಲಿ ಹೊಸ ಇತಿಹಾಸ

    ಕರೊನಾ ಭೀತಿ: ಬೇಡವೆಂದರೂ ಮನೆಯಿಂದ ಹೊರಹೋದ ತಮ್ಮನನ್ನೇ ಕೊಲೆಗೈದ ಅಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts