ತ್ರಿಶ್ಶೂರ್: ಕರೊನಾ ವೈರಸ್ ತಡೆಗಟ್ಟಲು ಕರೆ ನೀಡಿರುವ ಲಾಕ್ಡೌನ್ನಿಂದಾಗಿ ಆಲ್ಕೋಹಾಲ್ ಸಿಗುತ್ತಿಲ್ಲ ಎಂಬ ಹತಾಶೆಯಿಂದ ಕೇರಳದ 38 ವರ್ಷದ ದಿನಗೂಲಿ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ವೃತ್ತಿಯಲ್ಲಿ ಪೇಂಟರ್ ಆಗಿರುವ ಸನೋಜ್ ತಮ್ಮ ನಿವಾಸದ ಎದುರಿನ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಎಲ್ಲಿಯೂ ಆಲ್ಕೋಹಾಲ್ ದೊರೆಯದಿದ್ದಕ್ಕೆ ಸನೋಜ್ ತುಂಬಾ ಹತಾಶನಾಗಿದ್ದ ಎಂದು ಕುಟುಂಬದವರು ತಿಳಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ವಾಭವಿಕವಲ್ಲದ ಮರಣ ಪ್ರಕರಣ ದಾಖಲಾಗಿದ್ದು, ಮತ್ತಷ್ಟು ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಲಾಕ್ಡೌನ್ ಆದೇಶ ಹೊರಬಿದ್ದಾಗಿನಿಂದ ಕೇರಳದಲ್ಲಿ ಖಾಸಗಿ ಮತ್ತು ಸರ್ಕಾರಿ ವೈನ್ ಸ್ಟೋರ್ಗಳು ಸಂಪೂರ್ಣ ಬಂದ್ ಆಗಿವೆ. ಈವರೆಗೂ ಕೇರಳದಲ್ಲಿ 120ಕ್ಕೂ ಹೆಚ್ಚು ಮಂದಿಗೆ ಕರೊನಾ ವೈರಸ್ ಸೋಂಕು ತಗುಲಿದೆ. (ಏಜೆನ್ಸೀಸ್)
ಐಪಿಎಲ್ ದಾಖಲೆ ಹಿಂದಿಕ್ಕಿದ ಪ್ರಧಾನಿ ಮೋದಿಯ ಲಾಕ್ಡೌನ್ ಘೋಷಣೆ: ಟಿವಿ ಲೋಕದಲ್ಲಿ ಹೊಸ ಇತಿಹಾಸ