More

    ಭಯೋತ್ಪಾದಕರ ಉತ್ಪಾದನಾ ಕೇಂದ್ರವಾಗುತ್ತಿರುವ ಕೇರಳ ರಾಜ್ಯಕ್ಕೆ ರಾಷ್ಟ್ರಪತಿ ಆಡಳಿತ ಹೇರಬೇಕು; ಟ್ವಿಟರ್​ನಲ್ಲಿ ಶೋಭಾ ಕರಂದ್ಲಾಜೆ

    ಬೆಂಗಳೂರು: ಕೇರಳ ರಾಜ್ಯಕ್ಕೆ ರಾಷ್ಟ್ರಪತಿ ಆಡಳಿತ ಹೇರಬೇಕು. ಕೇರಳ ಭಯೋತ್ಪಾದಕರ ಉತ್ಪಾದನಾ ಕೇಂದ್ರವಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ.

    ಪಾಕಿಸ್ತಾನದ ಕಾರ್ಖಾನೆಯಲ್ಲಿ ತಯಾರಿಸಿರುವ 14 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಂಸದೆ ಟ್ವೀಟ್​ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.

    ಕೊಲ್ಲಂ ಜಿಲ್ಲೆಯ ಕುಲತುಪೂಝಾ ಎಂಬಲ್ಲಿನ ಪೊಲೀಸ್​ ಠಾಣೆಯಿಂದ ಬಂದೂಕು ಮತ್ತು ಬುಲೆಟ್​ಗಳು ನಾಪತ್ತೆಯಾಗಿದ್ದವು. ಈಗ 14 ಜೀವಂತ ಬುಲೆಟ್​ಗಳು ಸಿಕ್ಕಿವೆ ಎಂದು ಬರೆದುಕೊಂಡಿದ್ದಾರೆ.

    ಸಿಎಎ ಪರ ಇರುವುದಕ್ಕೆ ಅಲ್ಲಿನ ಹಿಂದುಗಳಿಗೆ ಸಮಸ್ಯೆ ತಂದೊಡ್ಡಲಾಗುತ್ತಿದೆ. ಇದರ ಹೊಣೆ ಹೊತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    14 ಜೀವಂತ ಬುಲೆಟ್​ಗಳು ಸಿಕ್ಕಿರುವುದನ್ನು ಅಲ್ಲಿನ ಪೊಲೀಸರು ಖಚಿತ ಪಡಿಸಿದ್ದಾರೆ. ಜತೆಗೆ ಆ ಬುಲೆಟ್​ಗಳ ಮೇಲೆ ಪಾಕಿಸ್ತಾನದ ಮುದ್ರೆ ಇರುವುದಾಗಿ ತಿಳಿಸಿದ ಪೊಲೀಸರು ಹೆಚ್ಚಿನ ತನಿಖೆಯಿಂದಷ್ಟೆ ಸತ್ಯ ಬಯಲಾಗಬೇಕಿದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts