More

    ಕರ್ನಾಟಕ ಸಂಭ್ರಮ ವಿಶೇಷ ಕಾರ್ಯಕ್ರಮ

    ಧಾರವಾಡ: ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ವತಿಯಿಂದ ಕರ್ನಾಟಕ ಸಂಭ್ರಮ- 50 ವಿಶೇಷ ಕಾರ್ಯಕ್ರಮದ ಅಂಗವಾಗಿ ಪಂ. ಬಸವರಾಜ ರಾಜಗುರು ಬದುಕಿನ ವೃತ್ತಾಂತ ಕುರಿತ ‘ನಾ ರಾಜಗುರು’ ಸಂಗೀತ ನಾಟಕ ಮತ್ತು ತಬಲಾ ಸೋಲೋ ವಾದನ ಕಾರ್ಯಕ್ರಮವನ್ನು ನ. 24ರಂದು ಸಂಜೆ 5.30 ಗಂಟೆಗೆ ನಗರದ ಡಾ. ಅಣ್ಣಾಜಿರಾವ ಶಿರೂರ ಸೃಜನಾ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
    ಪಂ. ಸೋಮನಾಥ ಮರಡೂರ, ಪಂ. ಗಣಪತಿ ಭಟ್ ಹಾಸಣಗಿ ಉಪಸ್ಥಿತರಿರುವರು. ಡಾ. ಗೋವಿಂದ ಮಣ್ಣೂರ, ಡಾ. ಯಶವಂತ ಸರದೇಶಪಾಂಡೆ ಅತಿಥಿಗಳಾಗಿ ಭಾಗವಹಿಸುವರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ಭಾರತಿದೇವಿ ರಾಜಗುರು ಗೌರವ ಉಪಸ್ಥಿತರಿರುವರು.
    ರಂಗ ನಿರ್ದೇಶಕ ಮಹಾದೇವ ಹಡಪದ ಅವರ ರಂಗರೂಪ ಪರಿಕಲ್ಪನೆಯ ‘ನಾ ರಾಜಗುರು’ ಸಂಗೀತ ನಾಟಕದಲ್ಲಿ ಪಂ. ಬಸವರಾಜ ರಾಜಗುರು ಅವರ ಮೊಮ್ಮಗ ವಿಶ್ವರಾಜ ನಿಜಗುಣ ರಾಜಗುರು, ಪಂ. ರಾಜಗುರು ಪಾತ್ರ ನಿರ್ವಹಿಸಲಿದ್ದಾರೆ. ಸಹ ಕಲಾವಿದರರಾಗಿ ಜಯತೀರ್ಥ ಪಂಚಮುಖಿ ತಬಲಾ, ರಾಘವ ಕಮ್ಮಾರ ಹಾರ್ಮೋನಿಯಂ ನುಡಿಸಲಿದ್ದಾರೆ.
    ಪುಣೆಯ ಸುಪ್ರಸಿದ್ಧ ತಬಲಾ ಕಲಾವಿದ ಪಂ. ರಾಮದಾಸ್ ಪಳಸುಲೆ ಅವರಿಂದ ತಬಲಾ ಸೋಲೋ ವಾದನ ಕಾರ್ಯಕ್ರಮ ನಡೆಯಲಿದೆ. ಸಹ ಕಲಾವಿದರರಾಗಿ ಪುಣೆಯ ಅಭಿಷೇಕ ಸೀನಕರ ಹಾರ್ಮೋನಿಯಂ ಸಾಥ್ ನೀಡುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts